
Latest

ಭಾರೀ ಜಿದ್ದಾಜಿದ್ದಿ ಮತ್ತು ಪ್ರತಿಷ್ಠೆಯ ಕಣವಾದ ಶ್ರೀ ಬಸವೇಶ್ವರ ಸಹಕಾರ ಬ್ಯಾಂಕ್ ಶಿರಾಳಕೊಪ್ಪದ ಚುನಾವಣೆ….*
ಶಿರಾಳಕೊಪ್ಪ:19-01-2025 ಪಟ್ಟಣದ ಶ್ರೀ ಬಸವೇಶ್ವರ ಪಟ್ಟಣ ಸಹಕಾರಿ ಬ್ಯಾಂಕಿನ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆ ಭಾನುವಾರ ಭಾರೀ ಜಿದ್ದಾಜಿದ್ದಿ ನಿಂದ ನಡೆಯಿತು. ಶತಮಾನ ಕಂಡ 111ವರ್ಷ ಪೂರೈಸಿರುವ ಜಿಲ್ಲೆಯ ಪ್ರತಿಷ್ಟಿತ ಶ್ರೀ ಬಸವೇಶ್ವರ ಬ್ಯಾಂಕಿನ 13ನಿರ್ದೇಶಕರ ಸ್ಥಾನಗಳಿಗೆ 26ಜನ ಅಭ್ಯರ್ಥಿ ಗಳು ಸ್ಪರ್ಧೆ ಮಾಡಿದ್ದು ಮತದಾನ ಬಿರುಸಿನಿಂದ ನಡೆಯಿತು. 5 ಸಾವಿರಕ್ಕೂ ಹೆಚ್ಚು ಷೇರು ದಾರರನ್ನು ಹೊಂದಿರುವ ಬ್ಯಾಂಕಿನ ಚುನಾವಣೆಗೆ ಈ ಬಾರಿ 2329ಮತದಾರರು ಮತ ಚಲಾಯಿಸುವ ಹಕ್ಕು ಪಡೆದಿದ್ದರು. ಉಳಿದಂತೆ 683ಜನ ಷೇರು ದಾರರು ಹೈ…

ಶಿಕಾರಿಪುರದ ಪಿ ಎಲ್ ಡಿ ಬ್ಯಾಂಕ್ ಆಡಳಿತ ಮಂಡಳಿ ಚುನಾವಣೆ 6ಜನ ಕಾಂಗ್ರೆಸ್ ಬೆಂಬಲಿತರು ಆಯ್ಕೆ…
ಶಿಕಾರಿಪುರ:13-01-2024 ಪಟ್ಟಣದ ತಾಲ್ಲೂಕು ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ (ಪಿ ಎಲ್ ಡಿ) ಬ್ಯಾಂಕ್ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಸ್ಪರ್ಧಿಸಿದ 10 ಜನರಲ್ಲಿ ಕಾಂಗ್ರೆಸ್ ಪಕ್ಷ ಬೆಂಬಲಿತ 6 ಮಂದಿ ಅಭ್ಯರ್ಥಿಗಳು ಜಯ ಗಳಿಸಿದ್ದಾರೆಂದು ಕೆ ಪಿ ಸಿ ಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಶಿಕಾರಿಪುರ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಪ್ರಾಧಿಕಾರದ ಅಧ್ಯಕ್ಷ ಎಸ್ ಪಿ ನಾಗರಾಜ ಗೌಡ ತಿಳಿಸಿದರು. ಚುನಾವಣೆ ಯಲ್ಲಿ ಸ್ಪರ್ಧಿಸಿದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಉಮೇಶ್, ಶ್ರೀಮತಿ ಶಾಂತಮ್ಮ,…

ಶಿರಾಳಕೊಪ್ಪದ ಕೃಷಿ ಪತ್ತಿನಸಹಕಾರ ಸಂಘದ ಅಧ್ಯಕ್ಷರಾಗಿ ಟಿ. ಸಂಗಮೇಶ ಆಯ್ಕೆ…
ಶಿರಾಳಕೊಪ್ಪ :1-1-2024 ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರ ಚುನಾವಣೆಯಲ್ಲಿ ಸಂಗಮೇಶ್.ಟಿ. 9 ಮತಗಳನ್ನು ಪಡೆಯುವ ಮೂಲಕ ಪ್ರತಿಸ್ಪರ್ಧಿ ಹಾಲಪ್ಪ(4 ಮತ) ಅವರ ವಿರುದ್ಧ ಜಯಗಳಿಸಿದರು.ಉಪಾಧ್ಯಕ್ಷರಾಗಿ ಜಾವಗಟ್ಟಿ ಹೊಳೆಯಪ್ಪ ಅವಿರೋಧವಾಗಿ ಆಯ್ಕೆ ಆದರು. ವರದಿ: ನವೀದ್ ಶಿರಾಳಕೊಪ್ಪ

ಶರಣರ ವಚನಗಳನ್ನು ರಾಗವಾಗಿ ಹಾಡುವುದರ ಮೂಲಕ ಮಕ್ಕಳನ್ನು ರಂಜಿಸಿದ ಉಪನ್ಯಾಸಕಿ- ಶ್ರೀಮತಿ ಶಿವಲೀಲಾ….
ಶಿರಾಳಕೊಪ್ಪ:09-01-2025 ಪಟ್ಟಣದ ಅಕ್ಕಮಹಾದೇವಿ ಪ್ರೌಢ ಶಾಲೆಯಲ್ಲಿ ಗುರುವಾರ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಶ್ರೀಮತಿ ದಾಕ್ಷಾಯಣಮ್ಮ ದಂಪತಿ ದತ್ತಿ ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸ್ಥಳೀಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶ್ರೀ ಟಿ. ಎಂ ಮಂಜಣ್ಣ ದತ್ತಿ ಕಾರ್ಯಕ್ರಮದ ಧೇಯ ಮತ್ತು ಉದ್ದೇಶಗಳ ಬಗ್ಗೆ ಮಾಹಿತಿ ನೀಡಿದರು. ದತ್ತಿ ವಿಷಯವಾದ ” ಶಿವಶರಣರು ಸಮಾಜಕ್ಕೆ ನೀಡಿದ ಕೊಡುಗೆ” ಎಂಬುದರ ಬಗ್ಗೆ ಉಪನ್ಯಾಸವನ್ನು ಶ್ರೀಮತಿ ಶಿವಲೀಲಾ ನಾಗರಾಜ್ ಶಿಕ್ಷಕರು ಪ. ಪೊ. ಕಾಲೇಜು ಪ್ರೌಢಶಾಲಾ ವಿಭಾಗ…

ಶಿಕಾರಿಪುರ ತಾll ಅಡಿಕೆ ಅಭಿವೃದ್ಧಿ ಪರಿಷ್ಕರಣೆ ಮತ್ತು ಮಾರಾಟ ಸಂಘದ ಅಧ್ಯಕ್ಷರಾಗಿ ಬಿ. ಸಿದ್ದಪ್ಪ ಆಯ್ಕೆ…. ಸಂಸದರಿಂದ ಸನ್ಮಾನ.
ಶಿಕಾರಿಪುರ:9-1-2024 ತಾಲ್ಲೂಕು ಅಡಿಕೆ ಅಭಿವೃದ್ಧಿ ಪರಿಷ್ಕರಣೆ ಮತ್ತು ಮಾರಾಟ ಸಹಕಾರ ಸಂಘ ನಿ,ದ ನೂತನ ಅಧ್ಯಕ್ಷರಾಗಿ ತಾಳಗುಂದ ದ ಬಿ. ಸಿದ್ದಪ್ಪ ಆಯ್ಕೆಯಾಗಿದ್ದಾರೆ. ತಾಲ್ಲೂಕಿನ ತಾಳಗುಂದ ಗ್ರಾಮದವರಾದ ಶ್ರೀಯುತರು ಮಾದರಿ ರೈತರಾಗಿ ಗುರುತಿಸಿಕೊಂಡಿದ್ದು. ನೂತನ ಅಧ್ಯಕ್ಷರಿಗೆ ಸಂಸದ ಶ್ರೀ ಬಿ ವೈ ರಾಘವೇಂದ್ರ ರವರು ಸನ್ಮಾನಿಸಿ ಪ್ರೋತ್ಸಾಹ ನೀಡಿದ್ದಾರೆ. ಈ ಸಂಧರ್ಭದಲ್ಲಿ ಮಲೆನಾಡ ಅಭಿವೃದ್ಧಿ ಪ್ರತಿಷ್ಠಾನದ ಮಾಜಿ ಅಧ್ಯಕ್ಷ ಕೆ ಎಸ್ ಗುರುಮೂರ್ತಿ, ತಾಲ್ಲೂಕು ಬಿ ಜೆ ಪಿ ಕಾರ್ಯದರ್ಶಿ ಸತೀಶ್ ತಾಳಗುಂದ, ಸುಧೀರ ಮಾರವಳ್ಳಿ ಮತ್ತಿತರನ್ನು…
ನಟಿ ರಚಿತಾ ರಾಮ್ ಮೊದಲಸಂಭಾವನೆ ರಿವೀಲ್, ಡಿಂಪಲ್ಕ್ವೀನ್ ಎಷ್ಟೆಲ್ಲ ಕಷ್ಟ ಪಟ್ಟಿದ್ರು ?
ಸ್ಯಾಂಡಲ್ವುಡ್ಡಿಂಪಲ್ ಪಲ್ ಕ್ವೀನ್ ರಚಿತಾರಾಮ್ ಅವರು ಸದ್ಯಕನ್ನಡದ ಟಾಪ್ ನಟಿಯರಲ್ಲಿ ಒಬ್ಬರು.ಅಲ್ಲದೆ ಅತಿ ಹೆಚ್ಚುಸಂಭಾವನೆಪಡೆಯುವನಟಿ ಕೂಡ. ಸದ್ಯ ರಚಿತಾರಾಮ್ ಅವರ ಸಂಭಾವನೆಯು ಕೋಟಿಕ್ಲಬ್ನಲ್ಲಿದೆ. ಆದರೆ ಅವರ ಮೊದಲಸಂಭಾವನೆ ಎಷ್ಟು ಎನ್ನುವ ಅಚ್ಚರಿ ವಿಚಾರವನ್ನು ಸ್ವತಃ ಅವರೇ ರಿವೀಲ್ ಮಾಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿರುವ ನಟಿರಚಿತಾ ರಾಮ್ ಅವರು ತಮ್ಮ ಸಿನಿಜರ್ನಿಯ ಬಗ್ಗೆ ಮಾತನಾಡಿದ್ದಾರೆ. ಎಲ್ಲರಿಗೂಗೊತ್ತಿರುವಂತೆ ನನ್ನನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದು ನಟದರ್ಶನ್ ಸಾರ್ ಎಂದು ನೆನೆದಿದ್ದಾರೆ. ಪ್ರತಿದಿನ ಮೇಕಪ್ ಹಚ್ಚಿದಾಗಲೆಲ್ಲ ನಾನು ದರ್ಶನ್ ಸಾರ್ ಅವರನ್ನು ನೆನೆಯುತ್ತೇನೆ. ದರ್ಶನ್ ಸಾರ್ಧ…

ಕರಾಟೆಯಲ್ಲಿ ಸಮಗ್ರ ಪ್ರಶಸ್ತಿ ಪಡೆದು ಕೀರ್ತಿ ತಂದ ಶ್ರೀಧರ ಇಂಟರ್ನ್ಯಾಷನಲ್ ಶಾಲೆಯ ವಿದ್ಯಾರ್ಥಿಗಳು….
ಶಿರಾಳಕೊಪ್ಪ:07/01/2025 ದಿನಾಂಕ 5/01/2025 ಭಾನುವಾರದಂದು ಶಿವಮೊಗ್ಗದ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ 2ನೇ ಆಲ್ ಇಂಡಿಯಾ ರಾಷ್ಟ್ರಮಟ್ಟದ ಮುಕ್ತ ಕರಾಟೆ ಚಾಂಪಿಯನ್ಶಿಪ್ – 2025 ಸಹ್ಯಾದ್ರಿ ಶಿವಮೊಗ್ಗ ಜಿಲ್ಲಾ ಕರಾಟೆ ಅಸೋಸಿಯೇಷನ್ ಮತ್ತು ಅಖಿಲ ಕರ್ನಾಟಕ ಕರಾಟೆ ಅಸೋಸಿಯೇಷನ್ ಇವರ ಸಹಯೋಗದೊಂದಿಗೆ ನಡೆದಂತಹ ಕ್ರೀಡಾಕೂಟದಲ್ಲಿ ಏಕಲವ್ಯ ಕರಾಟೆ ಕ್ಲಬ್ ನ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿಯನ್ನು ಪಡೆದು ಕೀರ್ತಿಯನ್ನು ತಂದಿರುತ್ತಾರೆ. ಹತ್ತಿರದ ಶ್ರೀಧರ್ ಇಂಟರ್ನ್ಯಾಷನಲ್ ಶಾಲೆಯ ವಿದ್ಯಾರ್ಥಿಗಳಾದ ಭಗತ್ ಎಂಎಸ್ . ಸಾಯೀಮ್ ಶುಂಠಿ, ಉದಯ .ಅವನೀಶ್ ವೇದಾಂತ್…

ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ಪುರಸಭೆಗೆ ಸಾರ್ವಜನಿಕರಿಂದ ಮನವಿ…
ಶಿರಾಳಕೊಪ್ಪ:06/01/2024 ಪಟ್ಟಣದಲ್ಲಿ ಅಭಿವೃದ್ಧಿ ಆಗದೆ ಇರುವ ಕೆಲ ಪ್ರದೇಶಗಳಿಗೆ ಪ್ರಸಕ್ತ ವರ್ಷದ ಬಜೆಟ್ ನಲ್ಲಿ ಹಣ ಮೀಸಲಿಡಿಸಿ ಕಾಮಗಾರಿಗಳನ್ನು ಮಾಡುವಂತೆ ಆಗ್ರಹಿಸಿ ಸಾರ್ವಜನಿಕರಿಂದ ಪುರಸಭೆ ಅಧಿಕಾರಿಗಳು ಹಾಗೂ ಆಡಳಿತ ಮಂಡಳಿಗೆ ಸೋಮವಾರ ಮನವಿ ಸಲ್ಲಿಸಲಾಯಿತು. ಪಟ್ಟಣದ ಅನೇಕ ಪ್ರದೇಶಗಳು ಅಭಿವೃದ್ಧಿ ವಂಚಿತವಾಗಿರುವುದನ್ನು ಪ್ರಸ್ತಾಪ ಮಾಡಿ ಮನವಿ ಸಲ್ಲಿಸಿದ ಸ್ಥಳೀಯ ನಾಗರೀಕರು ಆದಷ್ಟು ಬೇಗ ಅಭಿವೃದ್ಧಿ ಕಾರ್ಯಗಳು ಮಾಡುವಂತೆ ಬೇಡಿಕೆ ಇಟ್ಟರು. ಈ ಸಂಧರ್ಭದಲ್ಲಿ ಮಾತನಾಡಿದ ಸಾಮಾಜಿಕ ಹೋರಾಟಗಾರ ಅಬ್ದುಲ್ ನವೀದ್ ಪಟ್ಟಣದಲ್ಲಿ ವಿಶೇಷವಾಗಿ ಅಲ್ಪ ಸಂಖ್ಯಾತ ಸಮುದಾಯ…

ಹಳ್ಳ ಹಿಡಿದು ಹೋದ ಐ ಲವ್ ಶಿರಾಳಕೊಪ್ಪ ಪಾರ್ಕ್….ಪುರಸಭೆ ಬೇಜವಾಬ್ದಾರಿತನ…. ಜನರಲ್ಲಿ ಆಕ್ರೋಶ.
ಶಿರಾಳಕೊಪ್ಪ:04/01/2025. ಪಟ್ಟಣದ ಬಸ್ಟ್ಯಾಂಡ್ ಸರ್ಕಲ್ ಹತ್ತಿರವಿರುವ ಪುರಸಭೆ ವ್ಯಾಪ್ತಿಗೆ ಒಳಪಟ್ಟ ವಾಣಿಜ್ಯ ಮಳಿಗೆಗಳ ಪಕ್ಕದಲ್ಲಿರುವ ಖಾಲಿ ಜಾಗದಲ್ಲಿ 2022-23 ನೇ ಸಾಲಿನಲ್ಲಿ ನಿರ್ಮಾಣವಾಗಿದ್ದ ಮಿನಿ ಪಾರ್ಕ್ ತಯಾರಾದ ಕೇವಲ 2ವರ್ಷಗಳ ಅವಧಿಯೊಳಗೆ ಹಾಳಾಗಿ ಹೋಗಿದ್ದು ಸ್ಥಳೀಯರಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಪಟ್ಟಣದ ಸೌಂದರ್ಯಕ್ಕೆ ಮೆರಗು ನೀಡುವಂತೆ ನಿರ್ಮಾಣ ಮಾಡಲಾಗಿದ್ದ ಮಿನಿ ಪಾರ್ಕ್ ಜನರನ್ನು ಆಕರ್ಷಸುತ್ತಿದ್ದು ಮಹಿಳೆಯರು ಮಕ್ಕಳು ಮತ್ತು ಹೊಸದಾಗಿ ಪಟ್ಟಣಕ್ಕೆ ಬಂದಂತಹ ಪ್ರವಾಸಿಗರು ತುಸು ಹೊತ್ತು ಅಲ್ಲಿ ನಿಂತು ಸೆಲ್ಫಿ ಮತ್ತು ಫೋಟೋಗಳನ್ನು ತೆಗೆದುಕೊಂಡು ಮುಂದೆ…

ಆಗಲಿದ ಮಾಜಿ ಪ್ರಧಾನಿಗಳಿಗೆ ಯೂಥ್ ಕಾಂಗ್ರೆಸ್ ವತಿಯಿಂದ ಶ್ರದ್ದಾಂಜಲಿ…
ಶಿರಾಳಕೊಪ್ಪ: ಭಾರತ ಮಾಜಿ ಪ್ರಧಾನ ಮಂತ್ರಿ ಡಾಕ್ಟರ್ ಮನಮೋಹನ್ ಸಿಂಗ್ ರವರ ನಿಧನದ ಹಿನ್ನೆಲೆಯಲ್ಲಿ ಪಟ್ಟಣದ ಬಸ್ ಸ್ಟಾಂಡ್ ಸರ್ಕಲ್ನಲ್ಲಿ ಯೂಥ್ ಕಾಂಗ್ರೆಸ್ ವತಿಯಿಂದ ಶ್ರದ್ಧಾಂಜಲಿ ಸಭೆ ನಡೆಸಲಾಯಿತು. ಡಾಕ್ಟರ್ ಮನಮೋಹನ್ ಸಿಂಗ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ತುಸು ಹೊತ್ತು ಮೌನಾಚರಣೆ ಮಾಡುವ ಮೂಲಕ ಮೃತ ಸಾಧಕನಿಗೆ ಶ್ರದ್ಧಾಂಜಲಿ ಅರ್ಪಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ನ ಯುವ ಮುಖಂಡ, ಇರ್ಫಾನ್ ಮುಹೀಬ್ ಸಾಬ್ ದೇಶವು ಆರ್ಥಿಕ ಹಿನ್ನಡೆ ಅನುಭವಿಸುತ್ತಿರುವ ಸಂದರ್ಭದಲ್ಲಿ ತಮ್ಮ ಬುದ್ಧಿವಂತಿಗೆ ಮತ್ತು…