Latest
ಬಡ ಕುಟುಂಬಕ್ಕೆ ಸೂರು ಭಾಗ್ಯ ನೀಡಿದ ಇತ್ತೇಹಾದ್ ಫೌಂಡೇಶನ್ ಸಂಸ್ಥೆ…..
ಶಿರಾಳಕೊಪ್ಪ: 14/11/2024 ಪಟ್ಟಣದ ಇತ್ತೇಹಾದ್ ಫೌಂಡೇಶನ್ ಸಂಸ್ಥೆ ವತಿಯಿಂದ ಬಡ ಕುಟುಂಬಕ್ಕೆ ಮನೆ ಕಟ್ಟಿ ಕೊಡಲಾಯಿತು. ಪಟ್ಟಣದ ಖಾನ್ಕೇರಿ ಪ್ರದೇಶದಲ್ಲಿ ತನ್ನ ಸ್ವಂತ ಖಾಲಿ ಜಾಗ ಇದ್ದು ಆ ಜಾಗದಲ್ಲಿ ಮನೆ ಕಟ್ಟಿಕೊಳ್ಳಲು ಪರದಾಡುತ್ತಿದ್ದ ವಿಧವೆ ಹೆಣ್ಣುಮಗಳಿಗೆ ಆಸರೆ ನೀಡಿದ ಇತ್ತೇಹಾದ್ ಸಂಸ್ಥೆ ತಮ್ಮ ಸ್ವಂತ ಖರ್ಚಿನಿಂದ ಮನೆಯನ್ನು ನಿರ್ಮಿಸಿ ಕೊಟ್ಟಿದ್ದಾರೆ. ಪಟ್ಟಣದಲ್ಲಿ ಕಳೆದ 5ವರ್ಷಗಳಿಂದ ಬಡವರ ಪರ, ನಿರ್ಗತಿಕರ ಪರ ಕೆಲಸ ಮಾಡುತ್ತಿರುವ ಇತ್ತೇಹಾದ್ ಸಂಸ್ಥೆ ಬಡ ರೋಗಿಗಳ ಚಿಕಿತ್ಸೆ, ರಂಜಾನ್ ಕಿಟ್, ಸೇರಿದಂತೆ ಅನೇಕ…
ಅಮ್ಮನಕೇರಿ: ಕಬ್ಬಡ್ಡಿ ಪಂದ್ಯಾವಳಿ, ಕಕ್ಕುಪ್ಪಿ ತಂಡ ಪ್ರಥಮ……
ವಿಜಯನಗರ:02-11-2024 ಜಿಲ್ಲೆಯ ಕೊಡ್ಲಿಗಿ ತಾಲ್ಲೂಕಿನ ಕಕ್ಕುಪ್ಪಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಮ್ಮನಕೇರಿ ಗ್ರಾಮದಲ್ಲಿ ನವಂಬರ್ 2 ಶನಿವಾರದಂದು ದೀಪಾವಳಿ ಹಬ್ಬದ ಪ್ರಯುಕ್ತ ಗ್ರಾಮದ ವಿವಿದ ಸಂಘಟನೆಗಳ ಸಹಯೋಗದಲ್ಲಿ, ಯುವಕರಿಗಾಗಿ ಕಬಡ್ಡಿ ಪಂದ್ಯಾವಳಿ ಜರುಗಿಸಲಾಯಿತು. ಪಂದ್ಯಾವಳಿಯಲ್ಲಿ ಕಕ್ಕುಪ್ಪಿಯ ಯುವಕರ ತಂಡ ಪ್ರಥಮ ಸ್ಥಾನ ಪಡೆಯಿತು, ದ್ವಿತೀಯ ಬಹುಮಾನ ಅಮ್ಮನ ಕೇರಿಯ ಭಗತ್ ಸಿಂಗ್ ಬಾಯ್ಸ್ ತಂಡ ಪಡೆದುಕೊಂಡಿತು. ಪಂದ್ಯಾವಳಿಗೆ ಪ್ರಥಮ ಬಹುಮಾನದ ಟ್ರೋಪಿಯನ್ನು, ಸಿಜಿ ಮಂಜುನಾಥ್ ಗೌಡ ರವರು ಕೊಡುಗೆಯಾಗಿ ನೀಡಿರುತ್ತಾರೆ. ದ್ವಿತೀಯ ಬಹುಮಾನವನ್ನು, ಶಿಕ್ಷಕರಾದ ಮಂಜುನಾಥ ಸ್ವಾಮಿ…
ಕನ್ನಡ ನೆಲದಲ್ಲಿ ಹುಟ್ಟಿದ್ದು ನಮ್ಮ ಪೂರ್ವಜನ್ಮದ ಫಲ: ಪಿಎಸ್ಐ ಪ್ರಶಾಂತ್ ಕುಮಾರ್ ಟಿ ಬಿ …..
ಶಿರಾಳಕೊಪ್ಪ: 01/11/2024. ಕನ್ನಡಿಗರು ಸ್ವಾಭಿಮಾನಿಗಳು , ಕನ್ನಡಿಗರು ಶಿಸ್ತಿನ ಸಿಪಾಯಿಗಳು, ಇಂತಹ ನಾಡಲ್ಲಿ ನಾವು ಹುಟ್ಟಿದ್ದು ನಮ್ಮ ಪೂರ್ವ ಜನ್ಮದ ಫಲ ಎಂದು ಪಟ್ಟಣದ ಪೊಲೀಸ್ ಠಾಣಿ ಉಪ ನಿರೀಕ್ಷಕ ಪ್ರಶಾಂತ ಕುಮಾರ್ ಅಭಿಪ್ರಾಯ ವ್ಯಕ್ತ ಪಡಿಸಿದರು. ಪಟ್ಟಣದ ಬಸ್ಟ್ಯಾಂಡ್ ನಲ್ಲಿ ಮಲೆನಾಡು ಟ್ಯಾಕ್ಸಿ ಮಾಲಕರ ಮತ್ತು ಚಾಲಕರ ಹಾಗೂ ಜೈ ಕರ್ನಾಟಕ ಆಟೋ ಚಾಲಕರ ಸಂಘದ ವತಿಯಿಂದ ನಡೆದ 69 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ತಾಯಿ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ…
ಕೂಡ್ಲಿಗಿ: ಮೇನ್ ಬಾಯ್ಸ್ ಶಾಲೆ ವಿದ್ಯಾರ್ಥಿನಿಯರು-ರಾಜ್ಯ ಕ್ರೀಡಾ ಕೂಟಕ್ಕೆ ಆಯ್ಕೆ-
ವಿಜಯನಗರ ಜಿಲ್ಲೆ ಕೂಡ್ಲಿಗಿ: ಕೂಡ್ಲಿಗಿ: ಮೇನ್ ಬಾಯ್ಸ್ ಶಾಲೆ ವಿದ್ಯಾರ್ಥಿನಿಯರು-ರಾಜ್ಯ ಕ್ರೀಡಾ ಕೂಟಕ್ಕೆ ಆಯ್ಕೆ– ವಿಜಯನಗರ ಜಿಲ್ಲೆ ಕೂಡ್ಲಿಗಿ: ಅಕ್ಟೋಬರ್ 30ರಂದು ಹೊಸಪೇಟೆಯಲ್ಲಿ, ಜರುಗಿದ “ವಿಜಯನಗರ ಜಿಲ್ಲಾ ಮಟ್ಟದ ಕ್ರೀಡಾಕೂಟ” ದಲ್ಲಿ. ಪಟ್ಟಣದ ಮೇನ್ ಬಾಯ್ಸ್ ಶಾಲೆಯ ವಿದ್ಯಾರ್ಥಿನಿಯರು ಕ್ರೀಡೆಗಳಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ಮೂರು ಕ್ರೀಡೆಗಳಲ್ಲಿ ವಿದ್ಯಾರ್ಥಿನಿಯರು ಪ್ರಥಮ ಸ್ಥಾನ ಪಡೆಯೋ ಮೂಲಕ, ರಾಜ್ಯ ಮಟ್ಟದ ಕ್ರೀಡಾ ಕೂಟಕ್ಕೆ ಆಯ್ಕೆಯಾಗಿದ್ದಾರೆ. ಈ ಮೂಲಕ ಮೇನ್ ಬಾಯ್ಸ್ ಶಾಲೆಯ ವಿದ್ಯಾರ್ಥಿನಿಯರು, ತಮ್ಮ ಶಾಲೆಗೆ ಕೀರ್ತಿ ತಂದಿದ್ದಾರೆಂದು ಶಾಲೆಯ…
ಕರ್ನಾಟಕ ಅಭಿವೃದ್ಧಿಯಲ್ಲಿ ಪ್ರಥಮ -ಶಾಸಕ ಡಾ”ಎನ್.ಟಿ. ಶ್ರೀನಿವಾಸ್-ನ1- ವಿಜಯನಗರ ಜಿಲ್ಲೆ ಕೂಡ್ಲಿಗಿ:
ಕರ್ನಾಟಕ ಅಭಿವೃದ್ಧಿಯಲ್ಲಿ ಪ್ರಥಮ -ಶಾಸಕ ಡಾ”ಎನ್.ಟಿ. ಶ್ರೀನಿವಾಸ್ ಕರ್ನಾಟಕ ಅಭಿವೃದ್ಧಿಯಲ್ಲಿ ಪ್ರಥಮ -ಶಾಸಕ ಡಾ”ಎನ್.ಟಿ. ಶ್ರೀನಿವಾಸ್-ನ1- ವಿಜಯನಗರ ಜಿಲ್ಲೆ ಕೂಡ್ಲಿಗಿ: ದೇಶದಲ್ಲಿಯೇ ಕರ್ನಾಟಕ ರಾಜ್ಯ ಅಭಿವೃದ್ಧಿಯಲ್ಲಿ ಪ್ರಥಮ ಸ್ಥಾನದಲ್ಲಿದೆ ಎಂದು ಶಾಸಕರಾದ ಡಾ”ಎನ್.ಟಿ.ಶ್ರೀನಿವಾಸ್ ರವರು ನುಡಿದರು. ಅವರು ತಾಲೂಕಾಡಳಿತ ಹಾಗೂ ಕನ್ನಡ ಪರ ಸಂಘಟನೆಗಳ ಸಹಯೋಗದಲ್ಲಿ, ಪಟ್ಟಣದ ಚಂದ್ರ ಶೇಖರ ಆಜಾದ್ ರಂಗ ಮಂದಿರದಲ್ಲಿ ಜರುಗಿದ. ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ, ಅವರು ಕನ್ನಡಾಂಭೆಗೆ ನಮಿಸಿ ಧ್ವಜಾರೋಹಣ ನೆರವೇರಿಸಿ ಗೌರವ ಸಮರ್ಪಿಸಿ ಮಾತನಾಡಿದರು. ಶೀಘ್ರದಲ್ಲಿಯೇ ಕ್ಷೇತ್ರದ 74 ಕೆರೆಗಳಿಗೆ,…
ಮುಸ್ಲಿಂ ಯುವಕನಿಂದ ಲಕ್ಷ್ಮೀ ಪೂಜೆ; ಮೆಚ್ಚುಗೆ!
ಮುಸ್ಲಿಂ ಯುವಕ ಹಾಗೂ ಆತನ ಸ್ನೇಹಿತರು ಹಿಂದೂ ಸಂಪ್ರದಾಯದಂತೆ ಲಕ್ಷ್ಮಿ ಪೂಜೆ ನೆರವೇರಿಸಿದ್ದಾರೆ.
ರಾಜ್ಯದಾದ್ಯಂತ ಇ -ಆಸ್ತಿ ತಂತ್ರಾಂಶ ಲೋಪ ಬಡವರಿಗೆ ಪ್ರಾಣ ಸಂಕಟ….
ಬೆಂಗಳೂರು. ಈ ಆಸ್ತಿ ಪ್ರಮಾಣ ಪತ್ರದಿಂದಾಗಿ ರಾಜ್ಯದ ಜನತೆ ಇನ್ನಿಲ್ಲದ ಸಮಸ್ಯೆ ಎದುರಿಸುತ್ತಿರುವುದು ಸುಳ್ಳಲ್ಲ. ಸುಳ್ಳು ಹೇಳಿಕೊಂಡು ಆಸ್ತಿಯನ್ನು ಪರಭಾರೆ ಮಾಡುವವರ ವಿರುದ್ಧ ರಾಜ್ಯ ಸರ್ಕಾರ ಕ್ರಮಕ್ಕೆ ಮುಂದಾಗ ಬೇಕೇ ಹೊರತು ಸಾಮಾನ್ಯ ಜನರ ಮೇಲೆ ಅಲ್ಲ ಎನ್ನುವುದು ಅನೇಕರ ಅಭಿಪ್ರಾಯವಾಗಿದೆ. ಈ ನಡುವೆ ಈ ಆಸ್ತಿ ಪ್ರಮಾಣ ಪತ್ರ ಪಡೆದುಕೊಳ್ಳುವುದಕ್ಕೆ ತೀವ್ರ ಪ್ರಮಾಣದಲ್ಲಿ ಹಲವು ಮಂದಿ ಸಮಸ್ಯೆಯನ್ನು ಎದುರಿಸುತ್ತಾ ಇರುವುದು ಕಂಡು ಬಂದಿದ್ದು ಕಂದಾಯ ಇಲಾಖೆಯಲ್ಲಿರುವ ಲೋಪಗಳನ್ನು, ತಪ್ಪುಗಳನ್ನು ಮುಚ್ಚಿ ಹಾಕುವ ನಿಟ್ಟಿನಲ್ಲಿ ಸಚಿವರ ಕ್ರಮವನ್ನು…
ಹೊನಲುಬೆಳಕಿನ ವಾಲಿಬಾಲ್ ಪಂದ್ಯಾವಳಿ…..
ಶಿರಾಳಕೊಪ್ಪ:29-10-2024 ಪಟ್ಟಣದ ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಭಾನುವಾರ ರಾಜ್ಯಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯನ್ನು ಯೂಥ್ ಕ್ಲಬ್ ವತಿಯಿಂದ ನಡೆಸಲಾಯಿತು. ಪಂದ್ಯಾವಳಿಗೆ ಶಿಕಾರಿಪುರ ತಾಲೂಕು ಕಾಂಗ್ರೆಸ್ ಪಕ್ಷದ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಟಾ ಶಿವಕುಮಾರ್ ಚಾಲನೆ ನೀಡಿ ಮಾತನಾಡಿದರು. ಮನುಷ್ಯ ತನ್ನ ವ್ಯಕ್ತಿತ್ವ ರೂಪಿಸಿಕೊಳ್ಳಲು ಮಾನಸಿಕ ಮತ್ತು ದೈಹಿಕ ಸಾಧನೆ ಮುಖ್ಯ. ಈ ಕಪ್ಯೂಟರ್ ಮತ್ತು ಮೊಬೈಲ್ ಯುಗದಲ್ಲಿ ಕ್ರೀಡೆ ಎನ್ನುವುದು ಮಾಯವಾಗಿದೆ. ಇಂತಹ ಸಂದರ್ಭದಲ್ಲಿ ಯೂಥ್ ಕ್ಲಬ್ ನಂತಹ ಸಂಘಟನೆಯ ಯುವಕರು…
ಕನ್ನಡ ರಥಕ್ಕೆ ವೈಭವದ ಸ್ವಾಗತ ಕೋರಿದ ಶಿಕಾರಿಪುರ ತಾ// ಜನತೆ….
ಶಿಕಾರಿಪುರ: 26-10-2024 ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ರಾಜ್ಯದ್ಯಂತ ಸಂಚರಿಸುತ್ತಿರುವ ಕನ್ನಡ ಜ್ಯೋತಿ ಹೊತ್ತ ಕನ್ನಡ ರಥ ಯಾತ್ರೆ ಇಂದು ಶಿಕಾರಿಪುರ ತಾಲ್ಲೂಕಿಗೆ ಆಗಮಿಸಿತು. ತಾಲ್ಲೂಕಿನ ವಿವಿಧ ಸರಕಾರಿ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಪರ ಸಂಘಟನೆಗಳಿಂದ ರಥಕ್ಕೆ ಅದ್ದೂರಿ ಸ್ವಾಗತ ಕೋರಲಾಯಿತು. ಶಿರಾಳಕೊಪ್ಪದ ವಾಲ್ಮೀಕಿ ಭವನ ಹತ್ತಿರ ಪಟ್ಟಣದ ಗಡಿ ಭಾಗಕ್ಕೆ ಆಗಮಿಸಿದ ಕನ್ನಡದ ರಥವನ್ನು ಸ್ಥಳೀಯ ಪುರಸಭೆ ಮುಖ್ಯ ಅಧಿಕಾರಿಗಳು,…
ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ – ಕುಂಸಿ ಪೊಲೀಸ್!
ಕುಂಸಿ ಪೊಲೀಸ್ ಠಾಣಾ ವ್ಯಾಪ್ತಿಯ ನಾಗರಭಾವಿ ಬಸ್ ನಿಲ್ದಾಣದಲ್ಲಿ ಯಾರೋ ಒಬ್ಬ ವ್ಯಕ್ತಿಯು ಮಾದಕ

