Latest
ಹಳ್ಳ ಹಿಡಿದು ಹೋದ ಐ ಲವ್ ಶಿರಾಳಕೊಪ್ಪ ಪಾರ್ಕ್….ಪುರಸಭೆ ಬೇಜವಾಬ್ದಾರಿತನ…. ಜನರಲ್ಲಿ ಆಕ್ರೋಶ.
ಶಿರಾಳಕೊಪ್ಪ:04/01/2025. ಪಟ್ಟಣದ ಬಸ್ಟ್ಯಾಂಡ್ ಸರ್ಕಲ್ ಹತ್ತಿರವಿರುವ ಪುರಸಭೆ ವ್ಯಾಪ್ತಿಗೆ ಒಳಪಟ್ಟ ವಾಣಿಜ್ಯ ಮಳಿಗೆಗಳ ಪಕ್ಕದಲ್ಲಿರುವ ಖಾಲಿ ಜಾಗದಲ್ಲಿ 2022-23 ನೇ ಸಾಲಿನಲ್ಲಿ ನಿರ್ಮಾಣವಾಗಿದ್ದ ಮಿನಿ ಪಾರ್ಕ್ ತಯಾರಾದ ಕೇವಲ 2ವರ್ಷಗಳ ಅವಧಿಯೊಳಗೆ ಹಾಳಾಗಿ ಹೋಗಿದ್ದು ಸ್ಥಳೀಯರಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಪಟ್ಟಣದ ಸೌಂದರ್ಯಕ್ಕೆ ಮೆರಗು ನೀಡುವಂತೆ ನಿರ್ಮಾಣ ಮಾಡಲಾಗಿದ್ದ ಮಿನಿ ಪಾರ್ಕ್ ಜನರನ್ನು ಆಕರ್ಷಸುತ್ತಿದ್ದು ಮಹಿಳೆಯರು ಮಕ್ಕಳು ಮತ್ತು ಹೊಸದಾಗಿ ಪಟ್ಟಣಕ್ಕೆ ಬಂದಂತಹ ಪ್ರವಾಸಿಗರು ತುಸು ಹೊತ್ತು ಅಲ್ಲಿ ನಿಂತು ಸೆಲ್ಫಿ ಮತ್ತು ಫೋಟೋಗಳನ್ನು ತೆಗೆದುಕೊಂಡು ಮುಂದೆ…
ಆಗಲಿದ ಮಾಜಿ ಪ್ರಧಾನಿಗಳಿಗೆ ಯೂಥ್ ಕಾಂಗ್ರೆಸ್ ವತಿಯಿಂದ ಶ್ರದ್ದಾಂಜಲಿ…
ಶಿರಾಳಕೊಪ್ಪ: ಭಾರತ ಮಾಜಿ ಪ್ರಧಾನ ಮಂತ್ರಿ ಡಾಕ್ಟರ್ ಮನಮೋಹನ್ ಸಿಂಗ್ ರವರ ನಿಧನದ ಹಿನ್ನೆಲೆಯಲ್ಲಿ ಪಟ್ಟಣದ ಬಸ್ ಸ್ಟಾಂಡ್ ಸರ್ಕಲ್ನಲ್ಲಿ ಯೂಥ್ ಕಾಂಗ್ರೆಸ್ ವತಿಯಿಂದ ಶ್ರದ್ಧಾಂಜಲಿ ಸಭೆ ನಡೆಸಲಾಯಿತು. ಡಾಕ್ಟರ್ ಮನಮೋಹನ್ ಸಿಂಗ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ತುಸು ಹೊತ್ತು ಮೌನಾಚರಣೆ ಮಾಡುವ ಮೂಲಕ ಮೃತ ಸಾಧಕನಿಗೆ ಶ್ರದ್ಧಾಂಜಲಿ ಅರ್ಪಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ನ ಯುವ ಮುಖಂಡ, ಇರ್ಫಾನ್ ಮುಹೀಬ್ ಸಾಬ್ ದೇಶವು ಆರ್ಥಿಕ ಹಿನ್ನಡೆ ಅನುಭವಿಸುತ್ತಿರುವ ಸಂದರ್ಭದಲ್ಲಿ ತಮ್ಮ ಬುದ್ಧಿವಂತಿಗೆ ಮತ್ತು…
ಅಂಬೇಡ್ಕರ್ ಮಾನವರೋಪದ ಪ್ರತ್ಯಕ್ಷ ದೇವರು-ಕಾಗಿನೆಲೆ ರಂಗಪ್ಪ….
ಶಿಕಾರಿಪುರ: 20-12-2024 ರಾಮ-ಕೃಷ್ಣ ನಿಮಗೆ ಕಾರಣದ ದೇವರಾದರೆ ಅಂಬೇಡ್ಕರ್ ನಮಗೆ ಪ್ರತ್ಯಕ್ಷ ಮಾನವ ರೂಪದ ದೇವರು ಅವರ ದೂರದೃಷ್ಠಿ ಪ್ರತಿಫಲ ನಾವಿಂದು ಎಲ್ಲ ಸೌಲಭ್ಯ ಅನುಭವಿಸುತ್ತಿದ್ದೇವೆ ಎಂದು ತಾಲೂಕು ಅಹಿಂದ ಒಕ್ಕೂಟದ ಅಧ್ಯಕ್ಷ ಕಾಗಿನಲ್ಲಿ ರಂಗಪ್ಪ ಹೇಳಿದರು. ಶುಕ್ರವಾರ ಪಟ್ಟಣದಲ್ಲಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು ಅವರು ದೇಶದ ಉನ್ನತ ಸ್ಥಾನದಲ್ಲಿರುವ ವ್ಯಕ್ತಿಯೇ ಅಂಬೇಡ್ಕರ್ ಕುರಿತು ಅವಹೇಳನ ಮಾತನ್ನಾಡುವ ಮೂಲಕ ಅವರ ಮನಸ್ಸಿನ ಕನ್ನಡಿ ಜನರೆದುರು ತೆರೆದಿಟ್ಟಿದ್ದಾರೆ ಅಂತಹವರ ಕುರಿತು ಜನತೆ ಎಚ್ಚರಿಕೆಯಿಂದ ಇರಬೇಕು ಎಂದರು. ಡಿಎಸ್ಎಸ್ ನ…
ಕನ್ನಡದ ಮೂಲ ನೆಲೆಯಲ್ಲಿ ಕನ್ನಡ ಮಾಯ… ಕೆನರಾ ಬ್ಯಾಂಕಿನಲ್ಲಿ ಮಲಯಾಳಿ ಚೆಕ್ ವಿತರಣೆ.
ಶಿರಾಳಕೊಪ್ಪ:20-12-2024 ಇಲ್ಲಿನ ಕೆನರಾ ಬ್ಯಾಂಕ್ ನಲ್ಲಿ ದಿನ ನಿತ್ಯ ಹಣ ಬಿಡುಗಡೆ ಮಾಡಿಕೊಳ್ಳಲು ಉಪಯೋಗಿಸುವ ಚೆಕ್ ಹಾಳೆ ಗಳು ಆಂಗ್ಲ ಮತ್ತು ಮಲಿಯಾಳಿ ಭಾಷೆಗಳಲ್ಲಿ ವಿತರಣೆ ಮಾಡಲಾಗುತ್ತಿದ್ದು ಗ್ರಾಹಕರಿಗೆ ತೊಂದರೆ ಉಂಟು ಮಾಡಿದೆ. ಕನ್ನಡದ ಮೊದಲ ದೊರೆ, ಕನ್ನಡದ ಮೂಲ ನೆಲೆಯಲ್ಲಿ ಕನ್ನಡವನ್ನು ಮಾಯೆ ಮಾಡಿ ಇತರೆ ಭಾಷೆಗಳಿಗೆ ಬೆಂಬಲ ನೀಡುತ್ತಿರುವ ಬ್ಯಾಂಕ್ ಸಿಬ್ಬಂಧಿಗಳ ವರ್ತನೆ ಕನ್ನಡ ಪರ ಮನಸ್ಸುಗಳಿಗೆ ಘಾಸಿ ಉಂಟು ಮಾಡಿದೆ. ಕನ್ನಡ ನೆಲೆಯಲ್ಲೇ ಕನ್ನಡವನ್ನು ನಿರ್ಲಕ್ಷ್ಯ ಮಾಡುತ್ತಿರುವುದು ಅಕ್ಷಮ್ಮ್ಯ ಅಪರಾಧವಾಗಿದ್ದು ಈ ಬಗ್ಗೆ…
ಬಜ್ಮೆ ಉಮ್ಮೀದ್ ಅದೀಬಿ ಶಿರಾಳಕೊಪ್ಪ ವತಿಯಿಂದ ರಾಷ್ಟ್ರೀಯ ಮಟ್ಟದ ಉರ್ದು ಕವಿ ಸಮ್ಮೇಳನ…
ಶಿರಾಳಕೊಪ್ಪ:11-12-2024 ಪಟ್ಟಣದ ಬಜ್ಮೆ ಉಮ್ಮೀದ್ ಅದೀಬಿ ಸಾಂಸ್ಕೃತಿಕ ಸಮಿತಿ ವತಿಯಿಂದ ಡಿಸೆಂಬರ್ 13 ಶುಕ್ರವಾರ ದಂದು ರಾತ್ರಿ 8:30 ಘಂಟೆ ಯಿಂದ ಇಲ್ಲಿನ ಟಿಪ್ಪು ಕಲ್ಯಾಣ ಮಂಟಪ ದಲ್ಲಿ ರಾಷ್ಟ್ರೀಯ ಮಟ್ಟದ ಉರ್ದು ಕವಿ ಸಮ್ಮೇಳನ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ ಮೊಹಮ್ಮದ್ ಅಯೂಬ್ ಕೆ. ಜಿ. ಎನ್ ತಿಳಿಸಿದರು. ಪಟ್ಟಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರತಿವರ್ಷದಂತೆ ಈ ವರ್ಷವೂ ಉರ್ದು ಕವಿ ಸಮ್ಮೇಳನ ನಡೆಯಲಿದ್ದು ಈ ಬಾರಿ ರಾಷ್ಟ್ರೀಯ ಮಟ್ಟದ ಉರ್ದು ಕವಿಗಳನ್ನು ಆಮಂತ್ರಿಸಲಾಗಿದೆ…
ವಿದ್ಯುತ್ ಲೈನ್ ತಗುಲಿ ಚಾಲಕ ಸಾವು…. ಮೆಸ್ಕಾಂ ಮೇಲೆ ಎಫ್ ಐ ಆರ್ ದಾಖಾಲು…..
ಶಿರಾಳಕೊಪ್ಪ: 7-12-2024 ಕ್ಯಾಂಟರ್ ಚಾಲನೆ ವೃತ್ತಿ ಮಾಡಿಕೊಂಡು ಮನೆಗೆ ಆಧಾರವಾಗಿದ್ದ ಯುವಕನೋರ್ವ ಮೆಸ್ಕಾಂ ಇಲಾಖೆಯ ನಿರ್ಲಕ್ಷ್ಯಕ್ಕೆ ಪ್ರಾಣ ಚೆಲ್ಲಿರುವ ಘಟನೆ ಸೊರಬ ತಾಲೂಕಿನ ಸುತ್ತುಕೋಟೆ ಗ್ರಾಮದಲ್ಲಿ ನಡೆದಿದೆ. ಶಿರಾಳಕೊಪ್ಪದ ಮಠದಗದ್ದೆ ನಿವಾಸಿ ಮೊಹಮ್ಮದ್ ಈಶಾಮ್ (32) ಮೃತ ಪಟ್ಟ ಕ್ಯಾಂಟರ್ ಚಾಲಕ. ಬಳ್ಳಿಗಾವಿಯಿಂದ ಸುತ್ತಕೋಟೆ ಹೋಗುವ ಮಾರ್ಗದಲ್ಲಿ ಕ್ಯಾಂಟರ್ ನಲ್ಲಿ ಹುಲ್ಲು ತುಂಬಿಕೊಂಡು ಬರುವಾಗ ಜೋತು ಬಿದ್ದ ವಿದ್ಯುತ್ ತಂತಿ ಕ್ಯಾಂಟರ್ ಗೆ ತಗುಲಿದೆ. ವಿದ್ಯುತ್ ಪ್ರವಹಿಸಿದ ಪರಿಣಾಮ ಕ್ಯಾಂಟರ್ ಚಾಲಕ ಮೊಹಮ್ಮದ್ ಈಶಾಮ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ….
ಶಿರಾಳಕೊಪ್ಪದಲ್ಲಿ SDPI ಪಕ್ಷದ ನೂತನ ಕಛೇರಿ ಉದ್ಘಾಟನೆ…
ಶಿವಮೊಗ್ಗ:29/11/2024 ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ SDPI ಪಕ್ಷದ ಶಿರಾಳಕೊಪ್ಪ ಘಟಕದ ಕಛೇರಿ ಉದ್ಘಾಟನೆ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿಯಾದ ರಿಯಾಜ್ ಫರಂಗಿಪೇಟೆ ರಿಬ್ಬನ್ ಕಟ್ ಮಾಡುವ ಮೂಲಕ ಉದ್ಘಾಟಿಸಿದರು. ಶಿರಾಳಕೊಪ್ಪ ಪಟ್ಟಣದ ಹಿರೇಕೆರೂರು ಮುಖ್ಯ ರಸ್ತೆಯಲ್ಲಿ ನಡೆದ ಪಕ್ಷದ ಕಛೇರಿ ಉದ್ಘಾಟನೆ ಮತ್ತು ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಎಸ್ ಡಿ ಪಿ ಐ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ವಾಗ್ಮಿ ರಿಯಾಜ್ ಫರಂಗಿಪೇಟೆ ನೇತೃತ್ವದಲ್ಲಿ ವಿವಿಧ ಪಕ್ಷಗಳನ್ನು ತೊರೆದು ಸುಮಾರು 50ಕಿಂತ ಹೆಚ್ಚು ಜನ…
ಭದ್ರಾಪುರದ ಶ್ರೀಧರ್ ಇಂಟರ್ನ್ಯಾಷನಲ್ ಸ್ಕೂಲ್ನಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಹಾಗೂ ಸಮಾಜ ಸೇವಕ ಡಿ.ಎಸ್. ಶಂಕರ್ ಶೇಟ್ ಉದ್ಘಾಟಿಸಿದರು.
ಶಿಕಾರಿಪುರ/ಶಿರಾಳಕೊಪ್ಪ:16-11-2024 ಶಾಸ್ತ್ರೀಯ ಭಾಷಾ ಸ್ಥಾನಮಾನ ಪಡೆದಿರುವ ಕನ್ನಡ ಅತ್ಯಂತ ಶ್ರೀಮಂತ ಭಾಷೆಯಾಗಿದ್ದು, ಕನ್ನಡ ಭಾಷೆಯ ಮೇಲೆ ಪ್ರತಿಯೊಬ್ಬರು ಅಭಿಮಾನ ಹೊಂದಬೇಕು ಎಂದು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಹಾಗೂ ಸಮಾಜ ಸೇವಕ ಡಿ.ಎಸ್. ಶಂಕರ್ ಶೇಟ್ ಹೇಳಿದರು. ತಾಲೂಕಿನ ಶಿರಾಳಕೊಪ್ಪ ಸಮೀಪದ ಭದ್ರಾಪುರದ ಶ್ರೀಧರ್ ಇಂಟರ್ನ್ಯಾಷನಲ್ ಸ್ಕೂಲ್ನಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನುಡಿದಿದ್ದನ್ನು ಬರೆಯುವ ಮತ್ತು ಬರೆದಂತೆ ನುಡಿಯುವ ಭಾಷೆ ಕನ್ನಡ ಮಾತ್ರ. ಅಂತಹ ಅಗಾಧವಾದ ಶಕ್ತಿ ಕನ್ನಡಕ್ಕಿದೆ. ಜೊತೆಗೆ…
ಸರಕಾರಿ ಆಸ್ಪತ್ರೆಯ ತೆರೆದ ತೊಟ್ಟಿಯಲ್ಲಿ ಮಗು ಬಿದ್ದು ಸಾವು……ಸಾಂತ್ವನ ಹೇಳಿ ಧೈರ್ಯ ತುಂಬಿದ ಸಂಸದ ಬಿ ವೈ ಆರ್.
ಶಿಕಾರಿಪುರ:16-11-2024 ಪಟ್ಟಣದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಯಲ್ಲಿ ಶುಕ್ರವಾರ ಮೂರು ವರ್ಷದ ಮಗು ಆಯಾನ್ ಆಟ ಆಡುತ್ತ ಆಕಸ್ಮಿಕವಾಗಿ ಬಿದ್ದು ಮೃತ ಪಟ್ಟಿದೆ. ಆಸ್ಪತ್ರೆಯ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದ್ದು ಕಾಮಗಾರಿಗೆ ಬಳಸಲು ನೀರು ಸಂಗ್ರಹಣೆ ಮಾಡುವ ಉದ್ದೇಶದಿಂದ ತೊಟ್ಟಿ ನಿರ್ಮಾಣ ಮಾಡಲಾಗಿದೆ. ಶುಕ್ರವಾರ ಪೋಷಕರೊಂದಿಗೆ ಸಂಭಂದಿ ರೋಗಿಯನ್ನು ನೋಡಲು ಬಂದ ಆಯಾನ್ ಆಟ ಆಡುತ್ತ ಕಾಮಗಾರಿ ಪ್ರದೇಶದಲ್ಲಿರುವ ತೊಟ್ಟಿ ಹತ್ತಿರ ಹೋಗಿ ಬಿದ್ದಿರುವುದಾಗಿ ಮಾಹಿತಿ ಲಭ್ಯ ವಾಗಿದೆ. ಸಂಸದರ ಭೇಟಿ: ತಾಲ್ಲೂಕಿನ ಮತ್ತಿ…
ಶ್ರೀ ಬಸವೇಶ್ವರ ಪಟ್ಟಣ ಸಹಕಾರ ಬ್ಯಾಂಕ್. ನಿ ಶಿರಾಳಕೊಪ್ಪದ ನೂತನ ಶಾಖೆ ಆನವಟ್ಟಿ ಯಲ್ಲಿ ಪ್ರಾರಂಭ…
ಶಿರಾಳಕೊಪ್ಪ:16/11/2024 ಬ್ಯಾಂಕು ಎಂದೊಡನೆ ಬಡವ, ಬಲ್ಲಿದ, ವರ್ತಕ – ನೌಕರ-ಚಾಕರ, ಪಂಡಿತ-ಪಾಮರರೆಲ್ಲರಿಗೂ ಹಣಕಾಸಿನ ವ್ಯವಹಾರ ಮಾಡಲು ಅನುಕೂಲವಾದ ಅತ್ಯಂತ “ವಿಶ್ವಾಸಾರ್ಹ ಸ್ಥಾನ” ಎಂಬ ಭಾವನೆ ಥಟ್ಟನೆ ನಮ್ಮ ಮನಸ್ಸಿನಲ್ಲಿ ಮೂಡಿ ನಿಲ್ಲುತ್ತದೆ. ಅದರಲ್ಲೂ ಸಹಕಾರ ತತ್ವದ ತಳಹದಿಯೊಂದಿಗೆ ಸ್ಥಾಪಿತವಾದ ಬ್ಯಾಂಕು ಸಕಲ ಜನರ ಮೆಚ್ಚುಗೆಗೆ ಪಾತ್ರವಾಗಿರುವುದಲ್ಲದೆ ಎಲ್ಲರಲ್ಲೂ “ಇದು ನಮ್ಮ ಬ್ಯಾಂಕು” ಎಂಬ ಭಾವನೆಯನ್ನು ಒಡಮೂಡಿಸುತ್ತದೆ. ಒಂದು ಸಂಸ್ಥೆ ಜನ್ಮ ತಳೆದು ಬೆಳಕು ಕಾಣಲು ಹತ್ತಾರು ವ್ಯಕ್ತಿಗಳ ತ್ಯಾಗ , ಪರಿಶ್ರಮ ಹಾಗೂ ಪ್ರಾಮಾಣಿಕ ಪ್ರಯತ್ನಗಳೇ ಕಾರಣ…

