The Siasat News - Images

ಭದ್ರಾಪುರದ ಶ್ರೀಧರ್ ಇಂಟರ್ನ್ಯಾಷನಲ್ ಸ್ಕೂಲ್‍ನಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಹಾಗೂ ಸಮಾಜ ಸೇವಕ ಡಿ.ಎಸ್. ಶಂಕರ್ ಶೇಟ್ ಉದ್ಘಾಟಿಸಿದರು.

ಶಿಕಾರಿಪುರ/ಶಿರಾಳಕೊಪ್ಪ:16-11-2024 ಶಾಸ್ತ್ರೀಯ ಭಾಷಾ ಸ್ಥಾನಮಾನ ಪಡೆದಿರುವ ಕನ್ನಡ ಅತ್ಯಂತ ಶ್ರೀಮಂತ ಭಾಷೆಯಾಗಿದ್ದು, ಕನ್ನಡ ಭಾಷೆಯ ಮೇಲೆ ಪ್ರತಿಯೊಬ್ಬರು ಅಭಿಮಾನ ಹೊಂದಬೇಕು ಎಂದು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಹಾಗೂ ಸಮಾಜ ಸೇವಕ ಡಿ.ಎಸ್. ಶಂಕರ್ ಶೇಟ್ ಹೇಳಿದರು. ತಾಲೂಕಿನ ಶಿರಾಳಕೊಪ್ಪ ಸಮೀಪದ ಭದ್ರಾಪುರದ ಶ್ರೀಧರ್ ಇಂಟರ್ನ್ಯಾಷನಲ್ ಸ್ಕೂಲ್‍ನಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನುಡಿದಿದ್ದನ್ನು ಬರೆಯುವ ಮತ್ತು ಬರೆದಂತೆ ನುಡಿಯುವ ಭಾಷೆ ಕನ್ನಡ ಮಾತ್ರ. ಅಂತಹ ಅಗಾಧವಾದ ಶಕ್ತಿ ಕನ್ನಡಕ್ಕಿದೆ. ಜೊತೆಗೆ…

Read More
The Siasat News - Images

ಬಡ ಕುಟುಂಬಕ್ಕೆ ಸೂರು ಭಾಗ್ಯ ನೀಡಿದ ಇತ್ತೇಹಾದ್ ಫೌಂಡೇಶನ್ ಸಂಸ್ಥೆ…..

ಶಿರಾಳಕೊಪ್ಪ: 14/11/2024 ಪಟ್ಟಣದ ಇತ್ತೇಹಾದ್ ಫೌಂಡೇಶನ್ ಸಂಸ್ಥೆ ವತಿಯಿಂದ ಬಡ ಕುಟುಂಬಕ್ಕೆ ಮನೆ ಕಟ್ಟಿ ಕೊಡಲಾಯಿತು. ಪಟ್ಟಣದ ಖಾನ್ಕೇರಿ ಪ್ರದೇಶದಲ್ಲಿ ತನ್ನ ಸ್ವಂತ ಖಾಲಿ ಜಾಗ ಇದ್ದು ಆ ಜಾಗದಲ್ಲಿ ಮನೆ ಕಟ್ಟಿಕೊಳ್ಳಲು ಪರದಾಡುತ್ತಿದ್ದ ವಿಧವೆ ಹೆಣ್ಣುಮಗಳಿಗೆ ಆಸರೆ ನೀಡಿದ ಇತ್ತೇಹಾದ್ ಸಂಸ್ಥೆ ತಮ್ಮ ಸ್ವಂತ ಖರ್ಚಿನಿಂದ ಮನೆಯನ್ನು ನಿರ್ಮಿಸಿ ಕೊಟ್ಟಿದ್ದಾರೆ. ಪಟ್ಟಣದಲ್ಲಿ ಕಳೆದ 5ವರ್ಷಗಳಿಂದ ಬಡವರ ಪರ, ನಿರ್ಗತಿಕರ ಪರ ಕೆಲಸ ಮಾಡುತ್ತಿರುವ ಇತ್ತೇಹಾದ್ ಸಂಸ್ಥೆ ಬಡ ರೋಗಿಗಳ ಚಿಕಿತ್ಸೆ, ರಂಜಾನ್ ಕಿಟ್, ಸೇರಿದಂತೆ ಅನೇಕ…

Read More
The Siasat News - Images

ಕನ್ನಡ ನೆಲದಲ್ಲಿ ಹುಟ್ಟಿದ್ದು ನಮ್ಮ ಪೂರ್ವಜನ್ಮದ ಫಲ: ಪಿಎಸ್ಐ ಪ್ರಶಾಂತ್ ಕುಮಾರ್ ಟಿ ಬಿ …..

ಶಿರಾಳಕೊಪ್ಪ: 01/11/2024. ಕನ್ನಡಿಗರು ಸ್ವಾಭಿಮಾನಿಗಳು , ಕನ್ನಡಿಗರು ಶಿಸ್ತಿನ ಸಿಪಾಯಿಗಳು, ಇಂತಹ ನಾಡಲ್ಲಿ ನಾವು ಹುಟ್ಟಿದ್ದು ನಮ್ಮ ಪೂರ್ವ ಜನ್ಮದ ಫಲ ಎಂದು ಪಟ್ಟಣದ ಪೊಲೀಸ್ ಠಾಣಿ ಉಪ ನಿರೀಕ್ಷಕ ಪ್ರಶಾಂತ ಕುಮಾರ್ ಅಭಿಪ್ರಾಯ ವ್ಯಕ್ತ ಪಡಿಸಿದರು. ಪಟ್ಟಣದ ಬಸ್ಟ್ಯಾಂಡ್ ನಲ್ಲಿ ಮಲೆನಾಡು ಟ್ಯಾಕ್ಸಿ ಮಾಲಕರ ಮತ್ತು ಚಾಲಕರ ಹಾಗೂ ಜೈ ಕರ್ನಾಟಕ ಆಟೋ ಚಾಲಕರ ಸಂಘದ ವತಿಯಿಂದ ನಡೆದ 69 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ತಾಯಿ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ…

Read More
The Siasat News - Images

ಕನ್ನಡ ರಥಕ್ಕೆ ವೈಭವದ ಸ್ವಾಗತ ಕೋರಿದ ಶಿಕಾರಿಪುರ ತಾ// ಜನತೆ….

ಶಿಕಾರಿಪುರ: 26-10-2024 ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ರಾಜ್ಯದ್ಯಂತ ಸಂಚರಿಸುತ್ತಿರುವ ಕನ್ನಡ ಜ್ಯೋತಿ ಹೊತ್ತ ಕನ್ನಡ ರಥ ಯಾತ್ರೆ ಇಂದು ಶಿಕಾರಿಪುರ ತಾಲ್ಲೂಕಿಗೆ ಆಗಮಿಸಿತು. ತಾಲ್ಲೂಕಿನ ವಿವಿಧ ಸರಕಾರಿ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಪರ ಸಂಘಟನೆಗಳಿಂದ ರಥಕ್ಕೆ ಅದ್ದೂರಿ ಸ್ವಾಗತ ಕೋರಲಾಯಿತು. ಶಿರಾಳಕೊಪ್ಪದ ವಾಲ್ಮೀಕಿ ಭವನ ಹತ್ತಿರ ಪಟ್ಟಣದ ಗಡಿ ಭಾಗಕ್ಕೆ ಆಗಮಿಸಿದ ಕನ್ನಡದ ರಥವನ್ನು ಸ್ಥಳೀಯ ಪುರಸಭೆ ಮುಖ್ಯ ಅಧಿಕಾರಿಗಳು,…

Read More
The Siasat News - Images

ಶಿರಾಳಕೊಪ್ಪಕ್ಕೆ ಆಗಮಿಸಲಿರುವ ಕನ್ನಡ ರಥ ಯಾತ್ರೆ….ಅದ್ದೂರಿ ಸ್ವಾಗತಕ್ಕೆ ಕ ಸಾ ಪ ಹೋಬಳಿ ಘಟಕ ತಯಾರಿ….

ಶಿರಾಳಕೊಪ್ಪ: 25-10-2024 ಡಿಸೇಂಬರ್ 20, 21 ಹಾಗೂ 22 ರಂದು ಮಂಡ್ಯ ದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ರಾಜ್ಯ ದಾದ್ಯಂತ ಜಾಗೃತಿ ಮೋಡಿಸುವ ಸಲುವಾಗಿ ಆಗಮಿಸಲಿರುವ ಕನ್ನಡ ಜ್ಯೋತಿ ಹೊತ್ತ ಕನ್ನಡ ರಥ ಯಾತ್ರೆಯೂ ದಿನಾಂಕ 26-10-2024 ರಂದು ಮಧ್ಯಾಹ್ನ 12:30 ಕ್ಕೆ ಪಟ್ಟಣಕ್ಕೆ ಆಗಮಿಸಲಿದ್ದು ಅದ್ದೂರಿ ಸ್ವಾಗತಕ್ಕೆ ಕ ಸಾ ಪ ಹೋಬಳಿ ಘಟಕ ತಯಾರಿ ನಡೆಸಿದೆ ಎಂದು ಕರ್ನಾಟಕ ಸಾಹಿತ್ಯ ಪರಿಷತ್ತು ಶಿರಾಳಕೊಪ್ಪ ಹೋಬಳಿ ಘಟಕದ ಕಾರ್ಯದರ್ಶಿ…

Read More
The Siasat News - Images

ನಾಟಕ ಅವಲೋಕನ ಕಾರ್ಯಗಾರಕ್ಕೆ ಚಾಲನೆ…

ಶಿವಮೊಗ್ಗ: 25-10-2024 ರಂಗಾಯಣದಲ್ಲಿ ನಾಟಕ ಅವಲೋಕನ ಕಾರ್ಯಗಾರ ವನ್ನು ರಂಗ ನಿರ್ದೇಶಕ ನಟರಾಜ್ ಹೊನ್ನವಳ್ಳಿ “ಗುಣಮುಖ” ನಾಟಕದ ತುಣುಕೊಂದನ್ನು ಓದುವುದರ ಮೂಲಕ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ರಂಗಾಯಣ ಶಿವಮೊಗ್ಗದ ನಿರ್ದೇಶಕ ಪ್ರಸನ್ನ.ಡಿ ಸಾಗರ ಇವರು ವಹಿಸಿದ್ದು ಅತಿಥಿಗಳಾಗಿ ರಂಗ ಕರ್ಮಿ ಕೊಟ್ರಪ್ಪ ಹಿರೇಮಾಗಡಿ ಆಗಮಿಸಿದ್ದರು. ರಂಗಾಯಣ ಅಧಿಕಾರಿ ಶೈಲಜಾ ಎ.ಸಿ ಸ್ವಾಗತಿಸಿದರು. ಸಹ್ಯಾದ್ರಿ ಕಲಾ ಕಾಲೇಜು ಪ್ರಧ್ಯಾಪಕ ಪ್ರೊ: ಮೇಟಿ ಮಲ್ಲಿಕಾರ್ಜುನ ಹಾಗೂ ನಾಟಕ ಅವಲೋಕನ ಕಾರ್ಯಗಾರದ ನಿರ್ದೇಶಕ ಲವ ಜಿ. ಆರ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಿವಮೊಗ್ಗದ ವಿವಿಧ…

Read More
The Siasat News - Images

ಇಂದಿನ ಯುವಕರಲ್ಲಿ ಕಾನೂನು ಅರಿವು ಬಹು ಮುಖ್ಯ:ಹೆಚ್ಚುವರಿ ಪೋಲೀಸ್ ಅಧೀಕ್ಷಕ ಅನೀಲ್ ಕುಮಾರ್ ಭೂಮರೆಡ್ಡಿ….

ಶಿರಾಳಕೊಪ್ಪ:22-10-2024 ಇಂದಿನ ಯುವಕರು ಮಾದಕ ವ್ಯಸನಕ್ಕೆ ಬಲಿಯಾಗುತಿದ್ದಾರೆ. ಗಾಂಜಾದಂತಹ ಅಮಲು ಪದಾರ್ಥಗಳ ಸೇವನೆಯಿಂದ ಸಮಾಜದ ಸ್ವಾಥ್ಯ ಹಾಳಾಗುತ್ತಿದೆ. ಅಪರಾಧ ಪ್ರಕರಣಗಳು ಇಂಥಹ ಸಮಯದಲ್ಲೆ ಹೆಚ್ಚಾಗಿವೆ. ನಿಮ್ಮನ್ನು ವಿದ್ಯಾಬ್ಯಾಸಕ್ಕಾಗಿ ಕಳಿಸುವವರಿಗೆ ಮತ್ತು ಕಲಿಸಿದವರಿಗೆ ಗೌರವ ನೀಡುವ ಕೆಲಸ ಮಾಡಿ ಹೆಚ್ಚುವರಿ ಪೋಲೀಸ್ ಅಧೀಕ್ಷಕ ಅನೀಲ್ ಕುಮಾರ್ ಭೂಮರೆಡ್ಡಿ ವಿಧ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ನಡೆದ ಕಾನೂನು ಅರಿವು ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಕಾನೂನಿನ ಅಡಿಯಲ್ಲಿ ಮಹಿಳೆಯರು ಮಕ್ಕಳನ್ನು ರಕ್ಷಣೆ…

Read More