Education
ಶಿರಾಳಕೊಪ್ಪದ ಎಂ. ಆರ್ ಲೇಔಟ್ ನಲ್ಲಿ ಪ್ರಥಮ ಬಾರಿಯ ಗಣೇಶನ ಮೂರ್ತಿ ಪ್ರತಿಷ್ಠಾಪನೆ….
ಶಿರಾಳಕೊಪ್ಪ:29-8-2025 ಪಟ್ಟಣದ ಎಂ.ಆರ್ ಲೇಔಟ್, ಅರುಣೋದಯ ಲೇಔಟ್ ನಲ್ಲಿ ಪ್ರಥಮ ಬಾರಿಗೆ ಶೀ ಮಹಾಗಣಪತಿ ಮೂರ್ತಿಯ ಪ್ರತಿಷ್ಠಾಪನೆ ಮಾಡಲಾಯಿತು. ಕಲಾವಿದ ರತ್ನಾಕರ ಭಂಡಾರಿಯವರು ನಿರ್ಮಿಸಿದ ಕೇದಾರನಾಥ ದೇವಸ್ಥಾನ ಹಿನ್ನೆಲೆಯುಳ್ಳ ಮನಮೋಹಕ ಸ್ತಬ್ದ ಚಿತ್ರ ಜನರ ಆಕರ್ಷಣೆಗೆ ಕಾರಣವಾಗಿದೆ. ಸುಮಾರು 150 ಮನೆಗಳು ಇರುವ ಎಂ ಆರ್ ಲೇಔಟ್, ಅರುಣೋದಯ ಲೇಔಟ್ ನಲ್ಲಿ ರಸ್ತೆ ಸೇರಿದಂತೆ, ಚಿರಂಡಿ, ನೀರು, ಬೆಳಕಿನ ಸೌಕರ್ಯವಿಲ್ಲದ ಕಾರಣ ಸ್ಥಳೀಯರು, ವೃದ್ಧರು, ಮಕ್ಕಳು ಪರದಾಡುವ ಪರಿಸ್ಥಿತಿ ಎದುರಾಗಿದ್ದು ಸಂಭಂದ ಪಟ್ಟವರು ಗಮನ ಹರಿಸಬೇಕಾಗಿ ಸ್ಥಳೀಯರ…
ನಿವೃತ್ತಿ ಹೊಂದ ನೆಚ್ಚಿನ ಶಿಕ್ಷಕನಿಗೆ ವಿಜೃಂಭಣೆಯ ಬೀಳ್ಕೊಡುಗೆ ನೀಡಿದ ವಿದ್ಯಾರ್ಥಿಗಳು….
ರಾಣಿಬೆನ್ನೂರ: 7-8-2025 ಪಟ್ಟಣದ ಆಂಗ್ಲೋ ಉರ್ದು ಪ್ರೌಢಶಾಲೆ ಯಲ್ಲಿ ಕಳೆದ ಸುಮಾರು ವರ್ಷಗಳಿಂದ ಭೋದಕರಾಗಿ ಸೇವೆ ಸಲ್ಲಿಸಿ ನಿವೃತ್ತಿಗೊಂಡ ಶಿಕ್ಷಕ ಜನಾಬ್ ಅನೀಸ್ ಮೆಹಮೋದ್ ಖಾನ್ ಹರಿಹರ ರವರನ್ನು ಶಾಲೆಯ ಹಳೆ ವಿದ್ಯಾರ್ಥಿಗಳು ಗೌರವಿಸಿ, ಸನ್ಮಾನಿಸಿ ಆತ್ಮೀಯವಾಗಿ ಬೀಳ್ಕೊಡುಗೆ ಮಾಡುವುದರ ಮೂಲಕ ತಮ್ಮ ನೆಚ್ಚಿನ ಮೇಷ್ಟ್ರಿಗೆ ಗುರುವಂದನೆ ಅರ್ಪಣೆ ಮಾಡಿದ್ದಾರೆ. ಬುಧವಾರ ಪಟ್ಟಣದ ಟಿಪ್ಪು ಸುಲ್ತಾನ್ ಮ್ಯಾರೇಜ್ ಹಾಲ್ ನಲ್ಲಿ ನಡೆದ ಸಮಾರಂಭದಲ್ಲಿ ಹಾಲಿ ವಿದ್ಯಾರ್ಥಿಗಳು, ಶಾಲೆಯ ಹಳೆ ವಿದ್ಯಾರ್ಥಿಗಳು ಮತ್ತು ಪಟ್ಟಣದ ನಿವಾಸಿಗಳು ಸೇರಿ ಒಗ್ಗಟ್ಟಿನಿಂದ…
ಜಮೀರ್ ಅಹ್ಮದ್ ಖಾನ್ ಹುಟ್ಟುಹಬ್ಬದ ಪ್ರಯುಕ್ತ ಶಿರಾಳಕೊಪ್ಪದಲ್ಲಿ ಶಾಲಾ ಮಕ್ಕಳಿಗೆ ನೋಟ್ ಬುಕ್ ವಿತರಣೆ ಮಾಡಿದ ಅಭಿಮಾನಿಗಳು….
ರಾಜ್ಯ ವಖ್ಫ್ ಮತ್ತು ಅಲ್ಪ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವ ಜಮೀರ್ ಅಹಮದ್ ಖಾನ್ ರವರ ಹುಟ್ಟುಹಬ್ಬದ ಅಂಗವಾಗಿ ಉಡುಗಣಿಯ ಮುರಾರ್ಜಿದೇಸಾಯಿ ವಸತಿ ಶಾಲೆಯ ಮಕ್ಕಳಿಗೆ ನೋಟ್ ಪುಸ್ತಕಗಳು, ಲೇಖನಿಗಳು ಮತ್ತು ಪುಟಾಣಿಗಳಿಗೆ ಸಿಹಿಯನ್ನು ಹಂಚುವ ಮೂಲಕ ಸಂಭ್ರಮದ ಜನುಮ ದಿನವನ್ನು ಅವರ ಅಭಿಮಾನಿಗಳು ಆಚರಣೆ ಮಾಡಿದರು. ಶಿರಾಳಕೊಪ್ಪ:4/8/2025 ಈ ಸಂದರ್ಭದಲ್ಲಿ ಮಾತನಾಡಿದ ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷ ಹಿರಿಯ ಮುಖಂಡ ಆನವಟ್ಟಿ ಬಾಷ ಸಾಬ್ ಜಮೀರ್ ಅಹ್ಮದ್ ರವರದ್ದು ಸದಾ ಬಡವರ ಪರವಾಗಿ ಮಿಡಿಯುವ ಮನಸ್ಸು…
ಶಿರಾಳಕೊಪ್ಪದಲ್ಲಿ ಸೌಹಾರ್ದ ಇಫ್ತಾರ್ ಕೂಟ..
ಶಿರಾಳಕೊಪ್ಪ:22/03/2025 ರಾಜ್ಯದಾದ್ಯಂತ ಬೀದರ್ ನಿಂದ ಮೈಸೂರು ವರೆಗೂ ಸೌಹಾರ್ದ ಇಫ್ತಾರ್ ಕೂಟ ನಡೆಸುವ ಮೂಲಕ ಮಾನವ ಸಂಭಂದ ಗಳನ್ನು ಬೆಸುಗೆ ಹಾಕುವ ಕೆಲಸ ಜಮಾತೆ ಇಸ್ಲಾಮಿ ಹಿಂದ್ ಕರ್ನಾಟಕ ಘಟಕ ಮಾಡುತ್ತಿದೆ ಎಂದು ರಾಜ್ಯ ಇಸ್ಲಾಮಿಕ್ ಶಿಕ್ಷಣ ಮಂಡಳಿಯ ಕಾರ್ಯದರ್ಶಿ ಜನಾಬ್ ರಿಯಾಜ್ ಅಹ್ಮದ್ ರೋಣ ಹೇಳಿದರು. ಪಟ್ಟಣದ ಹಜರತ್ ಉಮರ್ ಫಾರೂಖ್ ಮಸೀದಿಯ ಸಭಾಂಗಣದಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ಗುರುವಾರ ನಡೆದ ಸೌಹಾರ್ದ ಇಫ್ತಾರ್ ಕೂಟದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರುನಾವು ಉಪಕಾರ ಮನೋಭಾವನೆಯನ್ನು ಹೊಂದುವ…
ಮುಸ್ಲಿಂ ಹಾಸ್ಟೆಲ್ ನಲ್ಲಿ ಸಿಗುತ್ತಿಲ್ಲ ಗುಣಮಟ್ಟದ ಆಹಾರ – ವಿದ್ಯಾರ್ಥಿ ಗಳಿಂದ ಸಚಿವರಿಗೆ ದೊರು…
ಶಿವಮೊಗ್ಗ:25-02-2025. ಜಿಲ್ಲೆಯ ವಕ್ಫ್ ಬೋರ್ಡ್ ಅಡಿಯಲ್ಲಿ ಸ್ಥಳೀಯ ಅಲ್ಪ ಸಂಖ್ಯಾತ ವಿದ್ಯಾರ್ಥಿಗಳಿಗೆ, ವಿದ್ಯಾಭ್ಯಾಸದ ಪ್ರಯುಕ್ತ ಅನುಕೂಲವಾಗಲೆಂದು ನಿರ್ಮಾಣಗೊಂಡಿರುವ ಮುಸ್ಲಿಂ ಹಾಸ್ಟೆಲ್ ನಲ್ಲಿ ವಿದ್ಯಾರ್ಥಿ ಗಳಿಗೆ ಗುಣ ಮಟ್ಟ ಇಲ್ಲದ ಊಟ ಸೇರಿದಂತೆ ಅನೇಕ ಸಮಸ್ಯೆ ಗಳು ಎದುರಾಗಿದ್ದು ಇದನ್ನೆಲ್ಲಾ ಬಗೆ ಹರಿಸಿ ಮತ್ತು ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕೆಂದು ವಖ್ಫ್ ಮತ್ತು ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆ ಸಚಿವ ಬಿ ಜೆಡ್ ಜಮೀರ್ ಅಹ್ಮದ್ ಗೆ ವಿದ್ಯಾರ್ಥಿ ಗಳಿಂದ ಮನವಿ ಸಲ್ಲಿಸಲಾಯಿತು. ಇಂದು ನಗರಕ್ಕೆ ಆಗಮಿಸಿದ…
ಬಂದೋಕು ತರಬೇತಿ ಪಡೆದಂತಹ ಸಾರ್ವಜನಿಕರು ಅರ್ಧ ಪೋಲೀಸರು- ಮಧು ಬಂಗಾರಪ್ಪ….
ಪೊಲೀಸ್ ಇಲಾಖೆ ವತಿಯಿಂದ ಸಾರ್ವಜನಿಕರಿಗೆ ನೀಡುವ ಬಂದೂಕು ತರಬೇತಿ ಶಿಬಿರ ಗಳಲ್ಲಿ ನುರಿತ ತರಬೇತಿ ದಾರರು ಪಬ್ಲಿಕ್ ಗೆ ಬಂದೋಕು
ಶಿರಾಳಕೊಪ್ಪದ ಲಂಗಡೆ (ಕಾಲು ಹೀನ) ಮೌಜಿನ್ ಸಾಬ್ ಇನ್ನಿಲ್ಲ……
ಶಿರಾಳಕೊಪ್ಪ:25-01-2025 ಪಟ್ಟಣದ ಮುಸ್ಲಿಂ ಸಮುದಾಯದಲ್ಲಿ ಲಂಗಡೆ ಮೌಜಿನ್ ಸಾಬ್ ಎಂದೇ ಸುಪ್ರಸಿದ್ದಿ ಪಡೆದಿದ್ದ ಊರಿನ ಜಾಮೀಯಾ ಮಸೀದಿಯ ಮೌಜಿನ್ (ಮಸೀದಿಯ ಆರೈಕೆ ಮಾಡುವವ) ಶ್ರೀ ಸಾಬ್ಜಾನ್ ಸಾಬ್ ರವರು ದಿನಾಂಕ 22/1/2025 ಬುಧವಾರ ದಂದು ತೀರಿಕೊಂಡಿದ್ದು ಶಿಕಾರಿಪುರ ತಾಲ್ಲೂಕಿನಾದ್ಯಂತ ಮೃತರ ಅನೇಕ ಮಂದಿ ಅಭಿಮಾನಿಗಳಿಗೆ ಘಾಸಿ ಉಂಟು ಮಾಡಿದೆ. ಕಳೆದ ಎರಡು ವರ್ಷಗಳಿಂದ ತೀವ್ರ ಅನಾರೋಗ್ಯ ದಿಂದ ಬಳಲುತ್ತಿದ್ದ ಸಾಬ್ಜಾನ್ ಸಾಹೇಬರು ಸುಮಾರು 45 ವರ್ಷ ಪಟ್ಟಣದ ಜಾಮೀಯಾ ಮಸೀದಿಯ ಆರೈಕೆ ಮತ್ತು ಧರ್ಮ ಕಾರ್ಯ ಮಾಡಿದ್ದು…
ಶರಣರ ವಚನಗಳನ್ನು ರಾಗವಾಗಿ ಹಾಡುವುದರ ಮೂಲಕ ಮಕ್ಕಳನ್ನು ರಂಜಿಸಿದ ಉಪನ್ಯಾಸಕಿ- ಶ್ರೀಮತಿ ಶಿವಲೀಲಾ….
ಶಿರಾಳಕೊಪ್ಪ:09-01-2025 ಪಟ್ಟಣದ ಅಕ್ಕಮಹಾದೇವಿ ಪ್ರೌಢ ಶಾಲೆಯಲ್ಲಿ ಗುರುವಾರ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಶ್ರೀಮತಿ ದಾಕ್ಷಾಯಣಮ್ಮ ದಂಪತಿ ದತ್ತಿ ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸ್ಥಳೀಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶ್ರೀ ಟಿ. ಎಂ ಮಂಜಣ್ಣ ದತ್ತಿ ಕಾರ್ಯಕ್ರಮದ ಧೇಯ ಮತ್ತು ಉದ್ದೇಶಗಳ ಬಗ್ಗೆ ಮಾಹಿತಿ ನೀಡಿದರು. ದತ್ತಿ ವಿಷಯವಾದ ” ಶಿವಶರಣರು ಸಮಾಜಕ್ಕೆ ನೀಡಿದ ಕೊಡುಗೆ” ಎಂಬುದರ ಬಗ್ಗೆ ಉಪನ್ಯಾಸವನ್ನು ಶ್ರೀಮತಿ ಶಿವಲೀಲಾ ನಾಗರಾಜ್ ಶಿಕ್ಷಕರು ಪ. ಪೊ. ಕಾಲೇಜು ಪ್ರೌಢಶಾಲಾ ವಿಭಾಗ…
ಕನ್ನಡದ ಮೂಲ ನೆಲೆಯಲ್ಲಿ ಕನ್ನಡ ಮಾಯ… ಕೆನರಾ ಬ್ಯಾಂಕಿನಲ್ಲಿ ಮಲಯಾಳಿ ಚೆಕ್ ವಿತರಣೆ.
ಶಿರಾಳಕೊಪ್ಪ:20-12-2024 ಇಲ್ಲಿನ ಕೆನರಾ ಬ್ಯಾಂಕ್ ನಲ್ಲಿ ದಿನ ನಿತ್ಯ ಹಣ ಬಿಡುಗಡೆ ಮಾಡಿಕೊಳ್ಳಲು ಉಪಯೋಗಿಸುವ ಚೆಕ್ ಹಾಳೆ ಗಳು ಆಂಗ್ಲ ಮತ್ತು ಮಲಿಯಾಳಿ ಭಾಷೆಗಳಲ್ಲಿ ವಿತರಣೆ ಮಾಡಲಾಗುತ್ತಿದ್ದು ಗ್ರಾಹಕರಿಗೆ ತೊಂದರೆ ಉಂಟು ಮಾಡಿದೆ. ಕನ್ನಡದ ಮೊದಲ ದೊರೆ, ಕನ್ನಡದ ಮೂಲ ನೆಲೆಯಲ್ಲಿ ಕನ್ನಡವನ್ನು ಮಾಯೆ ಮಾಡಿ ಇತರೆ ಭಾಷೆಗಳಿಗೆ ಬೆಂಬಲ ನೀಡುತ್ತಿರುವ ಬ್ಯಾಂಕ್ ಸಿಬ್ಬಂಧಿಗಳ ವರ್ತನೆ ಕನ್ನಡ ಪರ ಮನಸ್ಸುಗಳಿಗೆ ಘಾಸಿ ಉಂಟು ಮಾಡಿದೆ. ಕನ್ನಡ ನೆಲೆಯಲ್ಲೇ ಕನ್ನಡವನ್ನು ನಿರ್ಲಕ್ಷ್ಯ ಮಾಡುತ್ತಿರುವುದು ಅಕ್ಷಮ್ಮ್ಯ ಅಪರಾಧವಾಗಿದ್ದು ಈ ಬಗ್ಗೆ…
ಬಜ್ಮೆ ಉಮ್ಮೀದ್ ಅದೀಬಿ ಶಿರಾಳಕೊಪ್ಪ ವತಿಯಿಂದ ರಾಷ್ಟ್ರೀಯ ಮಟ್ಟದ ಉರ್ದು ಕವಿ ಸಮ್ಮೇಳನ…
ಶಿರಾಳಕೊಪ್ಪ:11-12-2024 ಪಟ್ಟಣದ ಬಜ್ಮೆ ಉಮ್ಮೀದ್ ಅದೀಬಿ ಸಾಂಸ್ಕೃತಿಕ ಸಮಿತಿ ವತಿಯಿಂದ ಡಿಸೆಂಬರ್ 13 ಶುಕ್ರವಾರ ದಂದು ರಾತ್ರಿ 8:30 ಘಂಟೆ ಯಿಂದ ಇಲ್ಲಿನ ಟಿಪ್ಪು ಕಲ್ಯಾಣ ಮಂಟಪ ದಲ್ಲಿ ರಾಷ್ಟ್ರೀಯ ಮಟ್ಟದ ಉರ್ದು ಕವಿ ಸಮ್ಮೇಳನ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ ಮೊಹಮ್ಮದ್ ಅಯೂಬ್ ಕೆ. ಜಿ. ಎನ್ ತಿಳಿಸಿದರು. ಪಟ್ಟಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರತಿವರ್ಷದಂತೆ ಈ ವರ್ಷವೂ ಉರ್ದು ಕವಿ ಸಮ್ಮೇಳನ ನಡೆಯಲಿದ್ದು ಈ ಬಾರಿ ರಾಷ್ಟ್ರೀಯ ಮಟ್ಟದ ಉರ್ದು ಕವಿಗಳನ್ನು ಆಮಂತ್ರಿಸಲಾಗಿದೆ…

