ಪಡಿತರಕ್ಕಾಗಿ ಪರದಾಡುತ್ತಿರುವ ಪ್ರಜೆಗಳು….ನ್ಯಾಯಬೆಲೆ ಅಂಗಡಿಗಳ ಮುಂದೆ ಕ್ಯೂವೊ ಕ್ಯೂ.
ಬೆಂಗಳೂರು:21-10-2024 ರಾಜ್ಯದಲ್ಲಿ ಪಡಿತರ ವಿತರಣೆಗಾಗಿ ಹಿಂದಿದ್ದ ಕೇಂದ್ರ ಸರ್ಕಾರದ ಎನ್ಐಸಿ ಸರ್ವರ್ ಗಳನ್ನು ಬದಲಾಯಿಸಿ ರಾಜ್ಯಸರಕಾರದ ವತಿಯಿಂದ ಹೊಸ ಸರ್ವರಗಳನ್ನು ಅಳವಡಿಸುವ ಕಾರ್ಯ ಅಕ್ಟೊಬರ್ ತಿಂಗಳ ಪ್ರಾರಂಭದಿಂದ ನಡೆದ ಕಾರಣ ಅಕ್ಟೊಬರ್ ತಿಂಗಳ 18ತಾರೀಕಿನವರೆಗೂ ರಾಜ್ಯದಾದ್ಯಂತ ಪಡಿತರ ವಿತರಣೆಯಲ್ಲಿ ವಿಳಂಬ ಆಯಿತು. ಬಡವರ, ಹಸಿದ ಜನರ ಹೊಟ್ಟೆಗೆ ಅನ್ನ ವನ್ನು ನೀಡುವ ರಾಜ್ಯ ಸರಕಾರದ ಮಹತ್ವಕಾಂಕ್ಷಿ ಯೋಜನೆ ಅನ್ನಭಾಗ್ಯಕ್ಕೆ ಸರ್ವರ್ ಕಾಟ ಕೊಡುತ್ತಿರುವುದು ಜನರಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಜನಸಾಮಾನ್ಯರು ರಾಜಕಾರಣಿ ಗಳು ಮತ್ತು ಅಧಿಕಾರಿಗಳಿಗೆ ಹಿಡಿ…

