
Politics

ಹಸಿವು ಮುಕ್ತ ಭಾರತ ಇಂದಿರಾ ಗಾಂಧಿಯವರು ಕಂಡ ಕನಸು- ಮಧು ಬಂಗಾರಪ್ಪ. ಶಿರಾಳಕೊಪ್ಪದಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟನೆ ಮಾಡಿದ ಸಚಿವರು
ಶಿರಾಳಕೊಪ್ಪ:25/5/2025. ಸರಕಾರದ ಮಹತ್ವಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಕಡಿಮೆ ದರದಲ್ಲಿ ಬಡವರ ಹಸಿವನ್ನು ನೀಗಿಸುವ ಕಾರ್ಯಕ್ರಮ ಇಂದಿರಾ ಕ್ಯಾಂಟೀನ್ ನ ಉದ್ಘಾಟನೆಯು ಭಾನುವಾರ ಶಾಲಾ ಮತ್ತು ಶಿಕ್ಷಣ ಸಚಿವ ಮಧು ಬಂಗಾರಪ್ಪ ನೆರವೇರಿಸಿದರು. ಪಟ್ಟಣದ ಹೃದಯ ಭಾಗ, ಹಿರೇಕೆರೂರು ರಸ್ತೆಯ ನಾಡಕಛೇರಿ ಹತ್ತಿರ ಪುರಸಭೆ ವತಿಯಿಂದ ನೂತನವಾಗಿ ನಿರ್ಮಾಣಗೊಂಡಿರುವ ಇಂದಿರಾ ಕ್ಯಾಂಟೀನ್ ನಲ್ಲಿ ಉಪಹಾರ ಸೇವಿಸುವ ಮೂಲಕ ಉದ್ಘಾಟನೆ ಮಾಡಿದ ಸಚಿವರು ಶ್ರೀಮತಿ ಇಂದಿರಾಗಾಂಧಿಯವರ ಅವಧಿಯಲ್ಲಿ 20ಪಾಯಿಂಟ್ ಕಾರ್ಯಕ್ರಮದಡಿಯಲ್ಲಿ ಸುಮಾರಷ್ಟು ಜನಕಲ್ಯಾಣ ಕಾರ್ಯಕ್ರಮಗಳು ರೂಪಗೊಂಡಿದ್ದು ಅದರಲ್ಲೇ ಮಹತ್ವದ ಕಾರ್ಯಕ್ರಮ…

ಅಭಿಮಾನಿಗಳಿಂದ ಜಾನಪದ ಕಲೆ ಜೀವಂತ- ಗುರುರಾಜ್ ಹೊಸಕೋಟಿ…
ಶಿರಾಳಕೊಪ್ಪ:30-03-2025 ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜರುಗುವ ಮನೊರಂಜನೆ ಸಂಸ್ಕಾರ ನೀಡುವಂತಿರಬೇಕು ಎಂದು ಜಾನಪದ ಕಲಾವಿದ ಗುರುರಾಜ್ ಹೊಸಕೋಟೆ ಅಭಿಪ್ರಾಯಪಟ್ಟರು. ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಭಾನುವಾರ ದಸರಾ ಉತ್ಸವ ಸಮಿತಿಯವರು ಆಯೋಗಿಸಿದ್ದ ಯುಗಾದಿ ಉತ್ಸವ ಕಾರ್ಯಕ್ರಮ ನೀಡಿ ಮಾತನಾಡಿದರು. ಇದುವರೆಗೂ ರಾಜ್ಯಾತ್ಯಂತ 13ಸಾವಿರ ಕಾರ್ಯಕ್ರಮ ನೀಡಿದ್ದೇವೆ. ನಿಮ್ಮ ಮಕ್ಕಳ ಕಲೆ ಬೆಳೆಸಿ, ಜನಪದ ಹಾಡಿಗೆ ಕಲೆಗೆ ಬೆಲೆ ಕೊಡಿ. ಜನಪದ ಸಾಹಿತ್ಯ ನಿಮ್ಮಂತಹ ಅಭಿಮಾನಿಗಳಿಂದ ಜೀವಂತವಾಗಿದೆ ಎಂದರು. ಐ.ಎಂ ಶಿವಾನಂದ ಸ್ವಾಮಿ ಪ್ರಾಸ್ತಾವಿಕ ಮಾತನಾಡಿ, 1989-90 ರಲ್ಲಿ ಶಿರಾಳಕೊಪ್ಪದಲ್ಲಿ…

ಶಿವಮೊಗ್ಗ ಜಿಲ್ಲೆಗೆ ಖಾಯಂ ವಕ್ಫ್ ಅಧಿಕಾರಿ ನೇಮಕ ಮಾಡಲು ಒತ್ತಾಯಿಸಿ ಮುಸ್ಲಿಂ ಮುಖಂಡರಿಂದ ಪ್ರತಿಭಟನೆ…
ಶಿವಮೊಗ್ಗ:04-03-2025 ಕಳೆದ ಎರಡು ವರ್ಷಗಳಿಂದ ಜಿಲ್ಲೆಯ ವಕ್ಫ್ ಬೋರ್ಡ್ ಕಚೇರಿಯಲ್ಲಿ ಖಾಯಂ ಅಧಿಕಾರಿ ಇಲ್ಲದ ಕಾರಣ ಜಿಲ್ಲೆಯಾದ್ಯಂತ ಅನೇಕ ಕಡೆ ಸಮಸ್ಯ ಗಳು ಎದುರಾಗಿರುವ ಪ್ರಸಂಗ ಗಳು ನಡೆದಿದೆ. ಕಚೇರಿಯ ಪ್ರಥಮ ದರ್ಜೆ ಸಹಾಯಕ ಮೆಹತಾಬ್ ರವರು ಖಾಯಂ ಅಧಿಕಾರಿ ಇಲ್ಲದ ಕಾರಣ ಹಂಗಾಮಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಸರಿಯಾಗಿ ಕೆಲಸ ಮಾಡುತ್ತಿಲ್ಲ ಸಾರ್ವಜನಿಕರು ಮತ್ತು ವಿದ್ಯಾರ್ಥಿ ಗಳು ಪರದಾಡುವ ಪರಿಸ್ಥಿತಿ ನಿರ್ಮಾಣ ಆಗಿದೆ ಆದಷ್ಟು ಬೇಗ ಖಾಯಂ ಆಗಿ ವಖ್ಫ್ ಅಧಿಕಾರಿಯನ್ನು ಸರಕಾರ ನೇಮಕ ಮಾಡಬೇಕೆಂದು…

ಮುಸ್ಲಿಂ ಹಾಸ್ಟೆಲ್ ನಲ್ಲಿ ಸಿಗುತ್ತಿಲ್ಲ ಗುಣಮಟ್ಟದ ಆಹಾರ – ವಿದ್ಯಾರ್ಥಿ ಗಳಿಂದ ಸಚಿವರಿಗೆ ದೊರು…
ಶಿವಮೊಗ್ಗ:25-02-2025. ಜಿಲ್ಲೆಯ ವಕ್ಫ್ ಬೋರ್ಡ್ ಅಡಿಯಲ್ಲಿ ಸ್ಥಳೀಯ ಅಲ್ಪ ಸಂಖ್ಯಾತ ವಿದ್ಯಾರ್ಥಿಗಳಿಗೆ, ವಿದ್ಯಾಭ್ಯಾಸದ ಪ್ರಯುಕ್ತ ಅನುಕೂಲವಾಗಲೆಂದು ನಿರ್ಮಾಣಗೊಂಡಿರುವ ಮುಸ್ಲಿಂ ಹಾಸ್ಟೆಲ್ ನಲ್ಲಿ ವಿದ್ಯಾರ್ಥಿ ಗಳಿಗೆ ಗುಣ ಮಟ್ಟ ಇಲ್ಲದ ಊಟ ಸೇರಿದಂತೆ ಅನೇಕ ಸಮಸ್ಯೆ ಗಳು ಎದುರಾಗಿದ್ದು ಇದನ್ನೆಲ್ಲಾ ಬಗೆ ಹರಿಸಿ ಮತ್ತು ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕೆಂದು ವಖ್ಫ್ ಮತ್ತು ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆ ಸಚಿವ ಬಿ ಜೆಡ್ ಜಮೀರ್ ಅಹ್ಮದ್ ಗೆ ವಿದ್ಯಾರ್ಥಿ ಗಳಿಂದ ಮನವಿ ಸಲ್ಲಿಸಲಾಯಿತು. ಇಂದು ನಗರಕ್ಕೆ ಆಗಮಿಸಿದ…

ಶ್ರೀ ಬಸವೇಶ್ವರ ಬ್ಯಾಂಕ್ ಮಾಜಿ ಅಧ್ಯಕ್ಷರಾದ ಚಂದ್ರಮೌಳೇಶ್ವರ ವಿಧಿವಶ…..
ಶಿರಾಳಕೊಪ್ಪ :30-01-2025 ಪಟ್ಟಣದ ಶ್ರೀ ಬಸವೇಶ್ವರ ಸಹಕಾರ ಬ್ಯಾಂಕ್ ಮಾಜಿ ಅಧ್ಯಕ್ಷರು ಹಾಗೂ ಸೇವಾ ವಿಕಾಸ ಶಾಲೆಯ ನಿರ್ದೇಶಕ ರಾದ ಚಂದ್ರಮೌಳೇಶ್ವರರವರು ಇಂದು ವಿಧಿ ವಶರಾದರು. ಕಳೆದ ಐದು ತಿಂಗಳು ಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಚಂದ್ರಮೌಳೇಶ್ವರ ರವರು ಇಂದು ದೈವಧೀನರಾಗಿದ್ದು ಅವರ ಅಪಾರ ಜನ ಅಭಿಮಾನಿಗಳು ಶೋಕದಲ್ಲಿದ್ದಾರೆ. ಮೃತರಿಗೆ ಹೆಂಡತಿ ಸೇರಿದಂತೆ ಎರಡು ಹೆಣ್ಣು ಮಕ್ಕಳು ಮತ್ತು ಓರ್ವ ಪುತ್ರ ರಿದ್ದಾರೆ. ಇವರ ಅಂತ್ಯ ಕ್ರಿಯೆ ನಾಳೆ 31/1/2025 ರಂದು ಬೆಳಗ್ಗೆ 12 ಕ್ಕೆ ಪಟ್ಟಣದ…

ತಕ್ಷಣ ಶಿಕಾರಿಪುರ ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸಿ….ರೈತ ಸಂಘ ಆಗ್ರಹ.
ಶಿರಾಳಕೊಪ್ಪ: 27-01-2025 ಹೋದ ವರ್ಷ ಸುರಿದ ಭಾರೀ ಮಳೆಯಿಂದಾಗಿ ಜಿಲ್ಲೆಯ ಎಲ್ಲಾ ಜಲಾಶಯಗಳು ಬಹುತೇಕ ತುಂಬಿವೆ ಆದರೂ ಕೊಡ ಇಲ್ಲಿಯ ತನಕವೂ ತಾಲ್ಲೂಕಿನ ತಾಳಗುಂದ, ಹೊಸೂರು ಹಾಗೂ ಉಡುಗಣಿ ಹೋಬಳಿಗಳ ಕೆರೆಗಳಿಗೆ ನೀರಾವರಿ ಇಲಾಖೆ ವತಿಯಿಂದ ಕೆರೆ ತುಂಬುವ ಕೆಲಸ ಆಗಿಲ್ಲ ಎಂದು ದೊರಿದ ಶಿಕಾರಿಪುರ ತಾಲ್ಲೂಕು ರೈತ ಸಂಘಟನೆಯ ಸದಸ್ಯರು ಸಂಘದ ಗೌರವ ಅಧ್ಯಕ್ಷ ಪ್ಯಾಟಿ ಈರಣ್ಣ ನೇತೃತ್ವದಲ್ಲಿ ಉಪ ತಹಸೀಲ್ದಾರ್ ರವರಿಗೆ ಮನವಿ ನೀಡಿದರು. ತಾಲ್ಲೂಕಿನ ಉಡುಗಣಿ, ಹೊಸೂರು ಮತ್ತು ತಾಳಗುಂದ ಹೋಬಳಿಗಳ ಹಳ್ಳಿಗಳಲ್ಲಿ…

ಭಾರೀ ಜಿದ್ದಾಜಿದ್ದಿ ಮತ್ತು ಪ್ರತಿಷ್ಠೆಯ ಕಣವಾದ ಶ್ರೀ ಬಸವೇಶ್ವರ ಸಹಕಾರ ಬ್ಯಾಂಕ್ ಶಿರಾಳಕೊಪ್ಪದ ಚುನಾವಣೆ….*
ಶಿರಾಳಕೊಪ್ಪ:19-01-2025 ಪಟ್ಟಣದ ಶ್ರೀ ಬಸವೇಶ್ವರ ಪಟ್ಟಣ ಸಹಕಾರಿ ಬ್ಯಾಂಕಿನ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆ ಭಾನುವಾರ ಭಾರೀ ಜಿದ್ದಾಜಿದ್ದಿ ನಿಂದ ನಡೆಯಿತು. ಶತಮಾನ ಕಂಡ 111ವರ್ಷ ಪೂರೈಸಿರುವ ಜಿಲ್ಲೆಯ ಪ್ರತಿಷ್ಟಿತ ಶ್ರೀ ಬಸವೇಶ್ವರ ಬ್ಯಾಂಕಿನ 13ನಿರ್ದೇಶಕರ ಸ್ಥಾನಗಳಿಗೆ 26ಜನ ಅಭ್ಯರ್ಥಿ ಗಳು ಸ್ಪರ್ಧೆ ಮಾಡಿದ್ದು ಮತದಾನ ಬಿರುಸಿನಿಂದ ನಡೆಯಿತು. 5 ಸಾವಿರಕ್ಕೂ ಹೆಚ್ಚು ಷೇರು ದಾರರನ್ನು ಹೊಂದಿರುವ ಬ್ಯಾಂಕಿನ ಚುನಾವಣೆಗೆ ಈ ಬಾರಿ 2329ಮತದಾರರು ಮತ ಚಲಾಯಿಸುವ ಹಕ್ಕು ಪಡೆದಿದ್ದರು. ಉಳಿದಂತೆ 683ಜನ ಷೇರು ದಾರರು ಹೈ…

ಶಿಕಾರಿಪುರದ ಪಿ ಎಲ್ ಡಿ ಬ್ಯಾಂಕ್ ಆಡಳಿತ ಮಂಡಳಿ ಚುನಾವಣೆ 6ಜನ ಕಾಂಗ್ರೆಸ್ ಬೆಂಬಲಿತರು ಆಯ್ಕೆ…
ಶಿಕಾರಿಪುರ:13-01-2024 ಪಟ್ಟಣದ ತಾಲ್ಲೂಕು ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ (ಪಿ ಎಲ್ ಡಿ) ಬ್ಯಾಂಕ್ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಸ್ಪರ್ಧಿಸಿದ 10 ಜನರಲ್ಲಿ ಕಾಂಗ್ರೆಸ್ ಪಕ್ಷ ಬೆಂಬಲಿತ 6 ಮಂದಿ ಅಭ್ಯರ್ಥಿಗಳು ಜಯ ಗಳಿಸಿದ್ದಾರೆಂದು ಕೆ ಪಿ ಸಿ ಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಶಿಕಾರಿಪುರ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಪ್ರಾಧಿಕಾರದ ಅಧ್ಯಕ್ಷ ಎಸ್ ಪಿ ನಾಗರಾಜ ಗೌಡ ತಿಳಿಸಿದರು. ಚುನಾವಣೆ ಯಲ್ಲಿ ಸ್ಪರ್ಧಿಸಿದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಉಮೇಶ್, ಶ್ರೀಮತಿ ಶಾಂತಮ್ಮ,…

ಶಿರಾಳಕೊಪ್ಪದ ಕೃಷಿ ಪತ್ತಿನಸಹಕಾರ ಸಂಘದ ಅಧ್ಯಕ್ಷರಾಗಿ ಟಿ. ಸಂಗಮೇಶ ಆಯ್ಕೆ…
ಶಿರಾಳಕೊಪ್ಪ :1-1-2024 ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರ ಚುನಾವಣೆಯಲ್ಲಿ ಸಂಗಮೇಶ್.ಟಿ. 9 ಮತಗಳನ್ನು ಪಡೆಯುವ ಮೂಲಕ ಪ್ರತಿಸ್ಪರ್ಧಿ ಹಾಲಪ್ಪ(4 ಮತ) ಅವರ ವಿರುದ್ಧ ಜಯಗಳಿಸಿದರು.ಉಪಾಧ್ಯಕ್ಷರಾಗಿ ಜಾವಗಟ್ಟಿ ಹೊಳೆಯಪ್ಪ ಅವಿರೋಧವಾಗಿ ಆಯ್ಕೆ ಆದರು. ವರದಿ: ನವೀದ್ ಶಿರಾಳಕೊಪ್ಪ

ಶರಣರ ವಚನಗಳನ್ನು ರಾಗವಾಗಿ ಹಾಡುವುದರ ಮೂಲಕ ಮಕ್ಕಳನ್ನು ರಂಜಿಸಿದ ಉಪನ್ಯಾಸಕಿ- ಶ್ರೀಮತಿ ಶಿವಲೀಲಾ….
ಶಿರಾಳಕೊಪ್ಪ:09-01-2025 ಪಟ್ಟಣದ ಅಕ್ಕಮಹಾದೇವಿ ಪ್ರೌಢ ಶಾಲೆಯಲ್ಲಿ ಗುರುವಾರ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಶ್ರೀಮತಿ ದಾಕ್ಷಾಯಣಮ್ಮ ದಂಪತಿ ದತ್ತಿ ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸ್ಥಳೀಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶ್ರೀ ಟಿ. ಎಂ ಮಂಜಣ್ಣ ದತ್ತಿ ಕಾರ್ಯಕ್ರಮದ ಧೇಯ ಮತ್ತು ಉದ್ದೇಶಗಳ ಬಗ್ಗೆ ಮಾಹಿತಿ ನೀಡಿದರು. ದತ್ತಿ ವಿಷಯವಾದ ” ಶಿವಶರಣರು ಸಮಾಜಕ್ಕೆ ನೀಡಿದ ಕೊಡುಗೆ” ಎಂಬುದರ ಬಗ್ಗೆ ಉಪನ್ಯಾಸವನ್ನು ಶ್ರೀಮತಿ ಶಿವಲೀಲಾ ನಾಗರಾಜ್ ಶಿಕ್ಷಕರು ಪ. ಪೊ. ಕಾಲೇಜು ಪ್ರೌಢಶಾಲಾ ವಿಭಾಗ…