Latest
ಮಕ್ಕಳ ದಿನಾಚರಣೆಯ ಅಂಗವಾಗಿ ಮಕ್ಕಳಿಂದ ಮಧುಮೇಹ ಜಾಗೃತಿ…
ಶಿರಾಳಕೊಪ್ಪ:14/11/2025 ಲಯನ್ಸ್ ಕ್ಲಬ್ ಶಿರಾಳಕೊಪ್ಪ, ಶಂಕರ ಕಣ್ಣಿನ ಆಸ್ಪತ್ರೆ ಶಿವಮೊಗ್ಗ, ಸ್ವಾಮಿ ವಿವೇಕಾನಂದ ಶಾಲೆ, ಬಸವೇಶ್ವರ ಪಟ್ಟಣ ಸಹಕಾರ ಬ್ಯಾಂಕ್ ಸಂಯುಕ್ತ ಆಶ್ರಯದಲ್ಲಿ ಮಕ್ಕಳ ದಿನಾಚರಣೆ ಮತ್ತುವಿಶ್ವ ಮಧುಮೇಹ ದಿನಾಚರಣೆಯನ್ನು ವಿಶೇಷ ವಾಗಿ ಆಚರಿಸಲಾಯಿತು. ಮಕ್ಕಳೇ ಜಾಗೃತಿ ರಾಯಭಾರಿಗಳಾಗಿ ವಾಕಥಾನ್ ಮೂಲಕ ಮಧುಮೇಹ ಅರಿವು ಮೂಡಿಸುವ ಘೋಷಣೆಯೊಂದಿಗೆ ಬಿತ್ತಿ ಪತ್ರ ವಿತರಿಸಿ ವಿಶಿಷ್ಟ ವಾಗಿ ಎರಡೂ ದಿನಾಚರಣೆಗಳನ್ನು ವಿನೂತನ ವಾಗಿ ಆಚರಿಸಿದರು. ವಾಕಥಾನ್ ನಲ್ಲಿ ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು, ಲಯನ್ಸ್ ಕ್ಲಬ್ ಸದಸ್ಯರು, ಶಂಕರ ಕಣ್ಣಿನ ಆಸ್ಪತ್ರೆ…
ಮಕ್ಕಳ ದಿನಾಚರಣೆದಂದು ಮಕ್ಕಳಿಂದ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ…
ಶಿರಾಳಕೊಪ್ಪ:14/11/2025 ಪಟ್ಟಣದ ಅಸ್-ಸುಫಾ ಪಬ್ಲಿಕ್ ಶಾಲೆಯ ಮಕ್ಕಳು ಇಂದು ಮಕ್ಕಳ ದಿನಾಚರಣೆ ಅಂಗವಾಗಿ ಪ್ರಾಥಮಿಕ ಸಮುದಾಯ ಕೇಂದ್ರದ ರೋಗಿಗಳಿಗೆ ಹಣ್ಣು ಹಂಪಲು ನೀಡಿ “ಮಕ್ಕಳ ದಿನ” ಆಚರಣೆ ಮಾಡಿದರು. ಶಾಲೆಯ ಮುಖ್ಯ ಶಿಕ್ಷಕ ಇಮ್ರಾನ್ ಮಾತನಾಡಿ ಈ ದಿನ ನಮ್ಮ ಶಾಲೆಯ ಮಕ್ಕಳು ತಮ್ಮ ಇಚ್ಛೆ ಮತ್ತು ಸ್ವಂತ ಖರ್ಚಿನಿಂದ ರೋಗಿ ಗಳಿಗೆ ಹಣ್ಣು ಹಂಪಲು ನೀಡಿದ್ದು ಖುಷಿ ತಂದಿದೆ. ಸಮಾಜದಲ್ಲಿನ ಆಗು ಹೋಗು ಮತ್ತು ಬಡವರ, ನಿರ್ಗತಿಕರ ಮತ್ತು ರೋಗಿಗಳ ಬಗ್ಗೆ ಸಣ್ಣ ವಯಸ್ಸಿನಿಂದಲೇ ಮಕ್ಕಳಲ್ಲಿ…
ಬಸ್ಟ್ಯಾಂಡ್ ಜಾಗ ಕಬಳಿಕೆ ಮಹಿಳೆಯರಿಂದ ಪ್ರತಿಭಟನೆ…
ಶಿರಾಳಕೊಪ್ಪ:8/9/2025 ಹತ್ತಿರದ ಶಿರಾಳಕೊಪ್ಪ-ಹಿರೇಕೆರೂರು ರಾಜ್ಯ ಹೆದ್ದಾರಿಯಲ್ಲಿ ಬರುವ ಹುಲುಗಿನಕೊಪ್ಪ ಗ್ರಾಮದಲ್ಲಿ ಖಾಸಗಿ ವ್ಯಕ್ತಿ ಗಳಿಂದ ಗ್ರಾಮದ ಬಸ್ಟ್ಯಾಂಡ್ ಕಬಳಿಕೆ ಆಗಿದೆ ಎಂದು ಗ್ರಾಮದ ಮಹಿಳೆಯರಿಂದ ಇಂದು ಪ್ರತಿಭಟನೆ ನಡೆಯಿತು. ಶಿಕಾರಿಪುರ ತಾಲ್ಲೂಕು ಕೊರಟಿಗೆರೆ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಡುವ ಹುಲುಗಿನ ಕೊಪ್ಪ ಗ್ರಾಮ ಸೇರಿದಂತೆ ಸಮೀಪದ ಹಲವಾರು ಹಳ್ಳಿ ಗಳಿಗೆ ಅನುಕೊಲ ವಾಗುವ ರೀತಿಯಲ್ಲಿ ಕಳೆದ ಸುಮಾರು 50 ವರ್ಷ ಗಳಿಂದ ಇದ್ದ ಗ್ರಾಮದ ಬಸ್ಟ್ಯಾಂಡನ್ನು ಸ್ಥಳೀಯ ವ್ಯಕ್ತಿ ಕಬಳಿಕೆ ಮಾಡಿಕೊಂಡು ಹಳೆಯ ಬಸ್ಟ್ಯಾಂಡ್ ಕಟ್ಟಡವನ್ನು ಹಂತ…
ಹೋರಿ ತಿವಿತ ರಾಷ್ಟ್ರೀಯ ವಾಹಿನಿಗಳಲ್ಲಿ ಸುದ್ದಿಯಾದ ಮಾಜಿ MLA ಮಹಾಲಿಂಗಪ್ಪ. ಪ್ರಾಣಾಪಾಯದಿಂದ ಪಾರು…
ಶಿರಾಳಕೊಪ್ಪ:26/10/2025 ಹತ್ತಿರದ ಬಳ್ಳಿಗಾವಿ ಗ್ರಾಮದಲ್ಲಿ ನಡೆದ ಹೋರಿ ಬೆದರಿಸುವ ಹಬ್ಬದಲ್ಲಿ ಮಾಜಿ ಶಾಸಕ ಬಿ.ಎನ್. ಮಹಾಲಿಂಗಪ್ಪ ಅವರು ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿದೆ. ಜನಸಂದಣಿ ಮಧ್ಯೆ ಹಬ್ಬದ ಉತ್ಸಾಹ ತಾರಕಕ್ಕೇರಿದಾಗ ಅನಿರೀಕ್ಷಿತವಾಗಿ ಓಡಿಬಂದ ಹೋರಿಯೊಂದು ಹಿಂದಿನಿಂದ ಬಂದು ಮಹಾಲಿಂಗಪ್ಪ ಅವರನ್ನು ತಿವಿದಿದೆ. ತಿವಿತದ ಹೊಡೆತಕೆ ಹಿಂದಕ್ಕೆ ನೆಲಕ್ಕುರುಳಿದ ಮಾಜಿ ಶಾಸಕರು ಕೆಲವು ಕ್ಷಣಗಳು ಚಲನೆಯಿಲ್ಲದೆ ಮಲಗಿದ್ದರು. ಆದರೆ ಅದೃಷ್ಟವಶಾತ್ ಹೋರಿ ಮತ್ತೆ ಹಿಂಬಾಲಿಸದೆ ಹಿಂದಕ್ಕೆ ತೆರಳಿದ ಪರಿಣಾಮ ದೊಡ್ಡ ಅನಾಹುತ ತಪ್ಪಿದೆ. ಈ ದೃಶ್ಯ ಸಾಮಾಜಿಕ ಮಾಧ್ಯಮಗಳಲ್ಲಿ…
ಮೆಸ್ಕಾಂ ಶಿರಾಳಕೊಪ್ಪ ವಿಭಾಗದ ಜನ ಸಂಪರ್ಕ ಸಭೆ…. ಗುತ್ತಿಗೆದಾರರ ಬಗ್ಗೆ ಆಕ್ರೋಶ ವ್ಯಕ್ತ ಪಡಿಸಿದ ಹೋರಾಟಗಾರ ಗಂಗಾಧರ ಶೆಟ್ಟರ್….
ಶಿರಾಳಕೊಪ್ಪ:15/10/2025 ಶಿರಾಳಕೊಪ್ಪ ಉಪ ವಿಭಾಗೀಯ ಮೆಸ್ಕಾಂ ಕಚೇರಿಯಲ್ಲಿ ಮಂಗಳವಾರ ಜನ ಸಂಪರ್ಕ ಸಭೆ ನಡೆಯಿತು. ಸಭೆಯಲ್ಲಿ ವಿವಿಧ ರಾಜಕೀಯ ಮುಖಂಡರು, ರೈತ ಸಂಘದ ಪದಾಧಿಕಾರಿಗಳು ಹಾಗೂ ಸ್ಥಳೀಯ ರೈತರು, ಪಟ್ಟಣದ ಸಾರ್ವಜನಿಕರು ಪಾಲ್ಗೊಂಡಿದ್ದು ಅಧಿಕಾರಿಗಳಿಗೆ ನೀಡಿದ ವಿವಿಧ ಕಾರ್ಯ ಗಳ ಅರ್ಜಿ ಗಳ ಬಗ್ಗೆ ಪ್ರಶ್ನೆ ಮತ್ತು ಆಗಬೇಕಾದ ಕೆಲಸಗಳ ಬಗ್ಗೆ ಮನವರಿಕೆ ಮಾಡಿದರು. ಈ ಸಂಧರ್ಭದಲ್ಲಿ ಮಾತನಾಡಿದ ಹೋರಾಟಗಾರ ಗಂಗಾಧರ ಶೆಟ್ಟರ್ ಕೆಲ ಗುತ್ತಿಗೆದಾರರು ತಮಗೆ ಅನುಕೊಲ ಆಗುವ ರೀತಿಯಲ್ಲಿ ಮಾತ್ರ ಕೆಲಸ ಮಾಡುತ್ತಿದ್ದು ಜನಗಳ…
ಬೆಳೆ ವಿಮೆ ವಿಳಂಬ ರೈತ ಸಂಘ ಆಕ್ರೋಶ…
ಶಿರಾಳಕೊಪ್ಪ:14/10/2025 ಅತಿಯಾದ ಮಳೆಯಿಂದಾಗಿ ಮೆಕ್ಕೆಜೋಳ ಮತ್ತು ಅಡಿಕೆ ಬೆಳೆಗಳು ಸಂಪೂರ್ಣ ಹಾಳಾಗಿದ್ದು ಸರಕಾರ ಆದಷ್ಟು ಬೇಗ ರೈತರಿಗೆ ಬೆಳೆ ವಿಮೆ ಕೊಡಬೇಕೆಂದು ರೈತ ಸಂಘದ ಜಿಲ್ಲಾ ಗೌರವಾಧ್ಯಕ್ಷ ಈರಣ್ಣ ಪ್ಯಾಟಿ ಆಗ್ರಹಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಈಗಾಗಲೇ ಶಿರಾಳಕೊಪ್ಪದ ಉಪ ತಹಸೀಲ್ದಾರ್ ರವರ ಮೂಲಕ ಬೆಳೆವಿಮೆ ವಿಚಾರವಾಗಿ ಸರಕಾರಕ್ಕೆ ಮನವಿಯನ್ನು ಸಲ್ಲಿಸಲಾಗಿದೆ ಆದರೆ ಇನ್ನೂವರೆಗೂ ಕೂಡ ಬೆಳೆ ವಿಮೆ ಮಾತ್ರ ಬಂದಿಲ್ಲ ಆದಷ್ಟು ಬೇಗ ಸರಕಾರ ಅಡಿಕೆ ಮತ್ತು ಮೆಕ್ಕೆಜೋಳಕ್ಕೆ ಬೆಳೆ…
ಮದ್ರಸ ಖಾದರಿಯ ದಾರುಲ್ ಉಲೂಮ್ ಸಣ್ಣ ಬ್ಯಾಂಡ್ ಕೇರಿಯ ಉದ್ಘಾಟನೆ ಕಾರ್ಯಕ್ರಮ ನೆರವೇರಿತು….
ಶಿರಾಳಕೊಪ್ಪ:11-10-2025 ಪಟ್ಟಣದ ಸಣ್ಣ ಬ್ಯಾಂಡ್ ಕೇರಿಯಲ್ಲಿ ನೂತನವಾಗಿ ನಿರ್ಮಾಣಗೊಂಡ ಮದ್ರಸ ಖಾದರಿಯ ದಾರುಲ್ ಉಲೂಮ್ ಮದ್ರಸದ ಉದ್ಘಾಟನೆ ಹಾಗೂ ಪ್ರವೇಶೋತ್ಸವ ಕಾರ್ಯಕ್ರಮ ಶುಕ್ರವಾರ ನಡೆಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮದ್ರಸಾದ ಗುರುಗಳು ಹಾಗೂ ಸ್ಥಳೀಯ ಹಜರತ್ ಬಿಲಾಲ್ ಮಸೀದಿಯ ಖತೀಬ್ ಮೌಲಾನ ರಾಹತ್ ಅಲಿ “ವಿದ್ಯಾರ್ಥಿಗಳಿಗೆ ಮದ್ರಸಾ ಶಿಕ್ಷಣವು ಅವರ ನೈತಿಕ ಜೀವನಕ್ಕೆ ಭದ್ರ ಬುನಾದಿ ಮಾತ್ರವಲ್ಲದೆ ಗುರುಹಿರಿಯರನ್ನು ಗೌರವದಿಂದ ನೋಡಿಕೊಳ್ಳುವ ಪರಿಪಾಠವನ್ನು ರೂಢಿಸಿಕೊಳ್ಳಲು ಸಹಕಾರಿಯಾಗಿದೆ” ಎಂದರು. ಮುಖ್ಯ ಅತಿಥಿಗಳಾಗಿ ಬೆಂಗಳೂರಿನಿಂದ ಆಗಮಿಸಿದ ಹಿರಿಯ ಧರ್ಮ ಗುರುಗಳಾದ…
ಟೂಲ್ ಗೇಟ್ ವಿರೋಧಿ ಹೋರಾಟಕ್ಕೆ ಜನತೆ ಬೆಂಬಲ…. ಶಿಕಾರಿಪುರ ಬಂದ್ ಯಶಸ್ವಿ.
ಶಿಕಾರಿಪುರ: 09/10/2025 ತಾಲೂಕಿನ ಕುಟ್ರಳ್ಳಿ ಸಮೀಪದಲ್ಲಿ ನಿರ್ಮಿಸಿದ ಟೋಲ್ ಗೇಟ್ ತೆರವುಗೊಳಿಸುವಂತೆ ಆಗ್ರಹಿಸಿ ನಡೆಯುತ್ತಿರುವ ಹೋರಾಟದ ಭಾಗವಾಗಿ ಗುರುವಾರ ಕರೆ ನೀಡಿದ ಶಿಕಾರಿಪುರ ಬಂದ್ ಸಂಪೂರ್ಣ ಯಶಸ್ವಿಯಾಯಿತು. ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ನವೀದ್ ಶಿರಾಳಕೊಪ್ಪ ಮಾತನಾಡಿ, ತಾಲೂಕಿನ ಜನತೆ ಸರ್ಕಾರಿ ಕಚೇರಿಗಳಿಗೆ, ರೋಗಿಗಳು ಆಸ್ಪತ್ರೆಗೆ ಸೇರಿದಂತೆ ವಿವಿಧ ಕೆಲಸ ಕಾರ್ಯಗಳಿಗೆ ಜಿಲ್ಲಾ ಕೇಂದ್ರ ತಲುಪಲು ಎರಡು ಬಾರಿ ಹಾಗೂ ತಾಲೂಕು ಕೇಂದ್ರ ತಲುಪಲು ಒಮ್ಮೆ ಟೋಲ್ ಶುಲ್ಕವನ್ನು ಪಾವತಿಸಬೇಕಿದೆ. ಅಲ್ಲದೇ, ಕಣಿವೆಮನೆ…
ಹೋರಾಟದ ರೋಪರೇಷೆ ಗಳು ಪ್ರಸ್ತಾಪಿಸಿದ ಟೋಲ್ ಹೋರಾಟ ಸಮಿತಿ…..ಶ್ರೀ ಹುಚ್ಚರಾಯಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪ್ರತಿಭಟನಾ ಮೆರವಣಿಗೆಗೆ ಚಾಲನೆ…
ಶಿಕಾರಿಪುರ:07/10/2025 ತಾಲ್ಲೂಕಿನ ಕುಟ್ರಹಳ್ಳಿಯಲ್ಲಿ ಅಳವಡಿಸಲಾದ ಟೋಲ್ಗೇಟ್ ವಿರುದ್ಧ ದಿನಾಂಕ 09/10/2025 ರಂದು ನಡೆಯಲಿರುವ “ಶಿಕಾರಿಪುರ ಬಂದ್ ” ಪ್ರತಿಭಟನಾ ಮೆರವಣಿಗೆ ಪಟ್ಟಣದ ಶ್ರೀ ಹುಚ್ಚರಾಯಸ್ವಾಮಿ ದೇವಸ್ಥಾನ ದಲ್ಲಿ ಬೆಳಗ್ಗೆ ಪೂಜೆ ಸಲ್ಲಿಸಿದ ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ತಾಲೂಕ ಕಚೇರಿ ಎದುರಿರುವ ಪಾರ್ಕ್ ಹತ್ತಿರ ಬರಲಿದೆ ಎಂದು ಟೂಲ್ ವಿರೋಧಿ ಹೋರಾಟ ಸಮಿತಿಯ ಅಧ್ಯಕ್ಷ ಶಿವರಾಜ್ ಸುಣ್ಣದಕೊಪ್ಪ ಹೇಳಿದರು. ಶಿರಾಳಕೊಪ್ಪದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಇವರು ಶ್ರೀ ಹುಚ್ಚರಾಯಸ್ವಾಮಿ ದೇವಸ್ಥಾನದಿಂದ ಹೊರಡಲಿರುವ…
ವಿಜಯ ದಶಮಿ ಹಬ್ಬ ಎಲ್ಲರನ್ನೂ ಒಟ್ಟು ಗೊಳಿಸುವ ಸೇತುವೆ- ದಸರಾ ಸಮಿತಿ ಅಧ್ಯಕ್ಷ ಯುವರಾಜ್ ಬಳ್ಳಾರಿ ಅಭಿಮತ….
ಶಿರಾಳಕೊಪ್ಪ:01-09-2025 ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ವಿಜಯ ದಶಮಿ ಉತ್ಸವ ಸಮಿತಿ ಸಭೆ ಯಲ್ಲಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳು ಸಂಬಂಧಗಳನ್ನು ಬೆಸೆಯುವ ಕೆಲಸ ಮಾಡುತ್ತವೆ ನಾಡಿನ ಸಂಸ್ಕೃತಿಯ ಪ್ರತೀಕವಾದ ವಿಜಯ ದಶಮಿ ಹಬ್ಬವು ಎಲ್ಲರನ್ನು ಒಟ್ಟುಗೋಡಿಸುವ ಸೇತುವೆಯಾಗಿದೆ.ಕೆಟ್ಟ ಶಕ್ತಿಗಳ ಮೇಲೆ ಒಳ್ಳೆಯ ಶಕ್ತಿಯ ವಿಜಯವನ್ನು ದಸರಾ ಪ್ರತಿನಿಧಿಸುತ್ತದೆ. ಪಟ್ಟಣದಲ್ಲಿ ವರ್ಷದಿಂದ ವರ್ಷಕ್ಕೆ ಸಾರ್ವಜನಿಕ ದಸರಾ ಉತ್ಸವ ಅದ್ದೂರಿಯಾಗಿ ನಡೆಯುತ್ತಿರುವುದು ಸಂತಸದ ವಿಷಯ ಅದೇ ರೀತಿಯಾಗಿ ಪ್ರಸಕ್ತ ವರ್ಷದಲ್ಲಿಯೂ ಸಹ ಅದ್ದೂರಿಯಾಗಿ…

