
Latest

ಅಂಬೇಡ್ಕರ್ ಮಾನವರೋಪದ ಪ್ರತ್ಯಕ್ಷ ದೇವರು-ಕಾಗಿನೆಲೆ ರಂಗಪ್ಪ….
ಶಿಕಾರಿಪುರ: 20-12-2024 ರಾಮ-ಕೃಷ್ಣ ನಿಮಗೆ ಕಾರಣದ ದೇವರಾದರೆ ಅಂಬೇಡ್ಕರ್ ನಮಗೆ ಪ್ರತ್ಯಕ್ಷ ಮಾನವ ರೂಪದ ದೇವರು ಅವರ ದೂರದೃಷ್ಠಿ ಪ್ರತಿಫಲ ನಾವಿಂದು ಎಲ್ಲ ಸೌಲಭ್ಯ ಅನುಭವಿಸುತ್ತಿದ್ದೇವೆ ಎಂದು ತಾಲೂಕು ಅಹಿಂದ ಒಕ್ಕೂಟದ ಅಧ್ಯಕ್ಷ ಕಾಗಿನಲ್ಲಿ ರಂಗಪ್ಪ ಹೇಳಿದರು. ಶುಕ್ರವಾರ ಪಟ್ಟಣದಲ್ಲಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು ಅವರು ದೇಶದ ಉನ್ನತ ಸ್ಥಾನದಲ್ಲಿರುವ ವ್ಯಕ್ತಿಯೇ ಅಂಬೇಡ್ಕರ್ ಕುರಿತು ಅವಹೇಳನ ಮಾತನ್ನಾಡುವ ಮೂಲಕ ಅವರ ಮನಸ್ಸಿನ ಕನ್ನಡಿ ಜನರೆದುರು ತೆರೆದಿಟ್ಟಿದ್ದಾರೆ ಅಂತಹವರ ಕುರಿತು ಜನತೆ ಎಚ್ಚರಿಕೆಯಿಂದ ಇರಬೇಕು ಎಂದರು. ಡಿಎಸ್ಎಸ್ ನ…

ಕನ್ನಡದ ಮೂಲ ನೆಲೆಯಲ್ಲಿ ಕನ್ನಡ ಮಾಯ… ಕೆನರಾ ಬ್ಯಾಂಕಿನಲ್ಲಿ ಮಲಯಾಳಿ ಚೆಕ್ ವಿತರಣೆ.
ಶಿರಾಳಕೊಪ್ಪ:20-12-2024 ಇಲ್ಲಿನ ಕೆನರಾ ಬ್ಯಾಂಕ್ ನಲ್ಲಿ ದಿನ ನಿತ್ಯ ಹಣ ಬಿಡುಗಡೆ ಮಾಡಿಕೊಳ್ಳಲು ಉಪಯೋಗಿಸುವ ಚೆಕ್ ಹಾಳೆ ಗಳು ಆಂಗ್ಲ ಮತ್ತು ಮಲಿಯಾಳಿ ಭಾಷೆಗಳಲ್ಲಿ ವಿತರಣೆ ಮಾಡಲಾಗುತ್ತಿದ್ದು ಗ್ರಾಹಕರಿಗೆ ತೊಂದರೆ ಉಂಟು ಮಾಡಿದೆ. ಕನ್ನಡದ ಮೊದಲ ದೊರೆ, ಕನ್ನಡದ ಮೂಲ ನೆಲೆಯಲ್ಲಿ ಕನ್ನಡವನ್ನು ಮಾಯೆ ಮಾಡಿ ಇತರೆ ಭಾಷೆಗಳಿಗೆ ಬೆಂಬಲ ನೀಡುತ್ತಿರುವ ಬ್ಯಾಂಕ್ ಸಿಬ್ಬಂಧಿಗಳ ವರ್ತನೆ ಕನ್ನಡ ಪರ ಮನಸ್ಸುಗಳಿಗೆ ಘಾಸಿ ಉಂಟು ಮಾಡಿದೆ. ಕನ್ನಡ ನೆಲೆಯಲ್ಲೇ ಕನ್ನಡವನ್ನು ನಿರ್ಲಕ್ಷ್ಯ ಮಾಡುತ್ತಿರುವುದು ಅಕ್ಷಮ್ಮ್ಯ ಅಪರಾಧವಾಗಿದ್ದು ಈ ಬಗ್ಗೆ…

ಬಜ್ಮೆ ಉಮ್ಮೀದ್ ಅದೀಬಿ ಶಿರಾಳಕೊಪ್ಪ ವತಿಯಿಂದ ರಾಷ್ಟ್ರೀಯ ಮಟ್ಟದ ಉರ್ದು ಕವಿ ಸಮ್ಮೇಳನ…
ಶಿರಾಳಕೊಪ್ಪ:11-12-2024 ಪಟ್ಟಣದ ಬಜ್ಮೆ ಉಮ್ಮೀದ್ ಅದೀಬಿ ಸಾಂಸ್ಕೃತಿಕ ಸಮಿತಿ ವತಿಯಿಂದ ಡಿಸೆಂಬರ್ 13 ಶುಕ್ರವಾರ ದಂದು ರಾತ್ರಿ 8:30 ಘಂಟೆ ಯಿಂದ ಇಲ್ಲಿನ ಟಿಪ್ಪು ಕಲ್ಯಾಣ ಮಂಟಪ ದಲ್ಲಿ ರಾಷ್ಟ್ರೀಯ ಮಟ್ಟದ ಉರ್ದು ಕವಿ ಸಮ್ಮೇಳನ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ ಮೊಹಮ್ಮದ್ ಅಯೂಬ್ ಕೆ. ಜಿ. ಎನ್ ತಿಳಿಸಿದರು. ಪಟ್ಟಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರತಿವರ್ಷದಂತೆ ಈ ವರ್ಷವೂ ಉರ್ದು ಕವಿ ಸಮ್ಮೇಳನ ನಡೆಯಲಿದ್ದು ಈ ಬಾರಿ ರಾಷ್ಟ್ರೀಯ ಮಟ್ಟದ ಉರ್ದು ಕವಿಗಳನ್ನು ಆಮಂತ್ರಿಸಲಾಗಿದೆ…

ವಿದ್ಯುತ್ ಲೈನ್ ತಗುಲಿ ಚಾಲಕ ಸಾವು…. ಮೆಸ್ಕಾಂ ಮೇಲೆ ಎಫ್ ಐ ಆರ್ ದಾಖಾಲು…..
ಶಿರಾಳಕೊಪ್ಪ: 7-12-2024 ಕ್ಯಾಂಟರ್ ಚಾಲನೆ ವೃತ್ತಿ ಮಾಡಿಕೊಂಡು ಮನೆಗೆ ಆಧಾರವಾಗಿದ್ದ ಯುವಕನೋರ್ವ ಮೆಸ್ಕಾಂ ಇಲಾಖೆಯ ನಿರ್ಲಕ್ಷ್ಯಕ್ಕೆ ಪ್ರಾಣ ಚೆಲ್ಲಿರುವ ಘಟನೆ ಸೊರಬ ತಾಲೂಕಿನ ಸುತ್ತುಕೋಟೆ ಗ್ರಾಮದಲ್ಲಿ ನಡೆದಿದೆ. ಶಿರಾಳಕೊಪ್ಪದ ಮಠದಗದ್ದೆ ನಿವಾಸಿ ಮೊಹಮ್ಮದ್ ಈಶಾಮ್ (32) ಮೃತ ಪಟ್ಟ ಕ್ಯಾಂಟರ್ ಚಾಲಕ. ಬಳ್ಳಿಗಾವಿಯಿಂದ ಸುತ್ತಕೋಟೆ ಹೋಗುವ ಮಾರ್ಗದಲ್ಲಿ ಕ್ಯಾಂಟರ್ ನಲ್ಲಿ ಹುಲ್ಲು ತುಂಬಿಕೊಂಡು ಬರುವಾಗ ಜೋತು ಬಿದ್ದ ವಿದ್ಯುತ್ ತಂತಿ ಕ್ಯಾಂಟರ್ ಗೆ ತಗುಲಿದೆ. ವಿದ್ಯುತ್ ಪ್ರವಹಿಸಿದ ಪರಿಣಾಮ ಕ್ಯಾಂಟರ್ ಚಾಲಕ ಮೊಹಮ್ಮದ್ ಈಶಾಮ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ….

ಶಿರಾಳಕೊಪ್ಪದಲ್ಲಿ SDPI ಪಕ್ಷದ ನೂತನ ಕಛೇರಿ ಉದ್ಘಾಟನೆ…
ಶಿವಮೊಗ್ಗ:29/11/2024 ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ SDPI ಪಕ್ಷದ ಶಿರಾಳಕೊಪ್ಪ ಘಟಕದ ಕಛೇರಿ ಉದ್ಘಾಟನೆ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿಯಾದ ರಿಯಾಜ್ ಫರಂಗಿಪೇಟೆ ರಿಬ್ಬನ್ ಕಟ್ ಮಾಡುವ ಮೂಲಕ ಉದ್ಘಾಟಿಸಿದರು. ಶಿರಾಳಕೊಪ್ಪ ಪಟ್ಟಣದ ಹಿರೇಕೆರೂರು ಮುಖ್ಯ ರಸ್ತೆಯಲ್ಲಿ ನಡೆದ ಪಕ್ಷದ ಕಛೇರಿ ಉದ್ಘಾಟನೆ ಮತ್ತು ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಎಸ್ ಡಿ ಪಿ ಐ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ವಾಗ್ಮಿ ರಿಯಾಜ್ ಫರಂಗಿಪೇಟೆ ನೇತೃತ್ವದಲ್ಲಿ ವಿವಿಧ ಪಕ್ಷಗಳನ್ನು ತೊರೆದು ಸುಮಾರು 50ಕಿಂತ ಹೆಚ್ಚು ಜನ…

ಭದ್ರಾಪುರದ ಶ್ರೀಧರ್ ಇಂಟರ್ನ್ಯಾಷನಲ್ ಸ್ಕೂಲ್ನಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಹಾಗೂ ಸಮಾಜ ಸೇವಕ ಡಿ.ಎಸ್. ಶಂಕರ್ ಶೇಟ್ ಉದ್ಘಾಟಿಸಿದರು.
ಶಿಕಾರಿಪುರ/ಶಿರಾಳಕೊಪ್ಪ:16-11-2024 ಶಾಸ್ತ್ರೀಯ ಭಾಷಾ ಸ್ಥಾನಮಾನ ಪಡೆದಿರುವ ಕನ್ನಡ ಅತ್ಯಂತ ಶ್ರೀಮಂತ ಭಾಷೆಯಾಗಿದ್ದು, ಕನ್ನಡ ಭಾಷೆಯ ಮೇಲೆ ಪ್ರತಿಯೊಬ್ಬರು ಅಭಿಮಾನ ಹೊಂದಬೇಕು ಎಂದು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಹಾಗೂ ಸಮಾಜ ಸೇವಕ ಡಿ.ಎಸ್. ಶಂಕರ್ ಶೇಟ್ ಹೇಳಿದರು. ತಾಲೂಕಿನ ಶಿರಾಳಕೊಪ್ಪ ಸಮೀಪದ ಭದ್ರಾಪುರದ ಶ್ರೀಧರ್ ಇಂಟರ್ನ್ಯಾಷನಲ್ ಸ್ಕೂಲ್ನಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನುಡಿದಿದ್ದನ್ನು ಬರೆಯುವ ಮತ್ತು ಬರೆದಂತೆ ನುಡಿಯುವ ಭಾಷೆ ಕನ್ನಡ ಮಾತ್ರ. ಅಂತಹ ಅಗಾಧವಾದ ಶಕ್ತಿ ಕನ್ನಡಕ್ಕಿದೆ. ಜೊತೆಗೆ…

ಸರಕಾರಿ ಆಸ್ಪತ್ರೆಯ ತೆರೆದ ತೊಟ್ಟಿಯಲ್ಲಿ ಮಗು ಬಿದ್ದು ಸಾವು……ಸಾಂತ್ವನ ಹೇಳಿ ಧೈರ್ಯ ತುಂಬಿದ ಸಂಸದ ಬಿ ವೈ ಆರ್.
ಶಿಕಾರಿಪುರ:16-11-2024 ಪಟ್ಟಣದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಯಲ್ಲಿ ಶುಕ್ರವಾರ ಮೂರು ವರ್ಷದ ಮಗು ಆಯಾನ್ ಆಟ ಆಡುತ್ತ ಆಕಸ್ಮಿಕವಾಗಿ ಬಿದ್ದು ಮೃತ ಪಟ್ಟಿದೆ. ಆಸ್ಪತ್ರೆಯ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದ್ದು ಕಾಮಗಾರಿಗೆ ಬಳಸಲು ನೀರು ಸಂಗ್ರಹಣೆ ಮಾಡುವ ಉದ್ದೇಶದಿಂದ ತೊಟ್ಟಿ ನಿರ್ಮಾಣ ಮಾಡಲಾಗಿದೆ. ಶುಕ್ರವಾರ ಪೋಷಕರೊಂದಿಗೆ ಸಂಭಂದಿ ರೋಗಿಯನ್ನು ನೋಡಲು ಬಂದ ಆಯಾನ್ ಆಟ ಆಡುತ್ತ ಕಾಮಗಾರಿ ಪ್ರದೇಶದಲ್ಲಿರುವ ತೊಟ್ಟಿ ಹತ್ತಿರ ಹೋಗಿ ಬಿದ್ದಿರುವುದಾಗಿ ಮಾಹಿತಿ ಲಭ್ಯ ವಾಗಿದೆ. ಸಂಸದರ ಭೇಟಿ: ತಾಲ್ಲೂಕಿನ ಮತ್ತಿ…

ಶ್ರೀ ಬಸವೇಶ್ವರ ಪಟ್ಟಣ ಸಹಕಾರ ಬ್ಯಾಂಕ್. ನಿ ಶಿರಾಳಕೊಪ್ಪದ ನೂತನ ಶಾಖೆ ಆನವಟ್ಟಿ ಯಲ್ಲಿ ಪ್ರಾರಂಭ…
ಶಿರಾಳಕೊಪ್ಪ:16/11/2024 ಬ್ಯಾಂಕು ಎಂದೊಡನೆ ಬಡವ, ಬಲ್ಲಿದ, ವರ್ತಕ – ನೌಕರ-ಚಾಕರ, ಪಂಡಿತ-ಪಾಮರರೆಲ್ಲರಿಗೂ ಹಣಕಾಸಿನ ವ್ಯವಹಾರ ಮಾಡಲು ಅನುಕೂಲವಾದ ಅತ್ಯಂತ “ವಿಶ್ವಾಸಾರ್ಹ ಸ್ಥಾನ” ಎಂಬ ಭಾವನೆ ಥಟ್ಟನೆ ನಮ್ಮ ಮನಸ್ಸಿನಲ್ಲಿ ಮೂಡಿ ನಿಲ್ಲುತ್ತದೆ. ಅದರಲ್ಲೂ ಸಹಕಾರ ತತ್ವದ ತಳಹದಿಯೊಂದಿಗೆ ಸ್ಥಾಪಿತವಾದ ಬ್ಯಾಂಕು ಸಕಲ ಜನರ ಮೆಚ್ಚುಗೆಗೆ ಪಾತ್ರವಾಗಿರುವುದಲ್ಲದೆ ಎಲ್ಲರಲ್ಲೂ “ಇದು ನಮ್ಮ ಬ್ಯಾಂಕು” ಎಂಬ ಭಾವನೆಯನ್ನು ಒಡಮೂಡಿಸುತ್ತದೆ. ಒಂದು ಸಂಸ್ಥೆ ಜನ್ಮ ತಳೆದು ಬೆಳಕು ಕಾಣಲು ಹತ್ತಾರು ವ್ಯಕ್ತಿಗಳ ತ್ಯಾಗ , ಪರಿಶ್ರಮ ಹಾಗೂ ಪ್ರಾಮಾಣಿಕ ಪ್ರಯತ್ನಗಳೇ ಕಾರಣ…

ಬಡ ಕುಟುಂಬಕ್ಕೆ ಸೂರು ಭಾಗ್ಯ ನೀಡಿದ ಇತ್ತೇಹಾದ್ ಫೌಂಡೇಶನ್ ಸಂಸ್ಥೆ…..
ಶಿರಾಳಕೊಪ್ಪ: 14/11/2024 ಪಟ್ಟಣದ ಇತ್ತೇಹಾದ್ ಫೌಂಡೇಶನ್ ಸಂಸ್ಥೆ ವತಿಯಿಂದ ಬಡ ಕುಟುಂಬಕ್ಕೆ ಮನೆ ಕಟ್ಟಿ ಕೊಡಲಾಯಿತು. ಪಟ್ಟಣದ ಖಾನ್ಕೇರಿ ಪ್ರದೇಶದಲ್ಲಿ ತನ್ನ ಸ್ವಂತ ಖಾಲಿ ಜಾಗ ಇದ್ದು ಆ ಜಾಗದಲ್ಲಿ ಮನೆ ಕಟ್ಟಿಕೊಳ್ಳಲು ಪರದಾಡುತ್ತಿದ್ದ ವಿಧವೆ ಹೆಣ್ಣುಮಗಳಿಗೆ ಆಸರೆ ನೀಡಿದ ಇತ್ತೇಹಾದ್ ಸಂಸ್ಥೆ ತಮ್ಮ ಸ್ವಂತ ಖರ್ಚಿನಿಂದ ಮನೆಯನ್ನು ನಿರ್ಮಿಸಿ ಕೊಟ್ಟಿದ್ದಾರೆ. ಪಟ್ಟಣದಲ್ಲಿ ಕಳೆದ 5ವರ್ಷಗಳಿಂದ ಬಡವರ ಪರ, ನಿರ್ಗತಿಕರ ಪರ ಕೆಲಸ ಮಾಡುತ್ತಿರುವ ಇತ್ತೇಹಾದ್ ಸಂಸ್ಥೆ ಬಡ ರೋಗಿಗಳ ಚಿಕಿತ್ಸೆ, ರಂಜಾನ್ ಕಿಟ್, ಸೇರಿದಂತೆ ಅನೇಕ…

ಅಮ್ಮನಕೇರಿ: ಕಬ್ಬಡ್ಡಿ ಪಂದ್ಯಾವಳಿ, ಕಕ್ಕುಪ್ಪಿ ತಂಡ ಪ್ರಥಮ……
ವಿಜಯನಗರ:02-11-2024 ಜಿಲ್ಲೆಯ ಕೊಡ್ಲಿಗಿ ತಾಲ್ಲೂಕಿನ ಕಕ್ಕುಪ್ಪಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಮ್ಮನಕೇರಿ ಗ್ರಾಮದಲ್ಲಿ ನವಂಬರ್ 2 ಶನಿವಾರದಂದು ದೀಪಾವಳಿ ಹಬ್ಬದ ಪ್ರಯುಕ್ತ ಗ್ರಾಮದ ವಿವಿದ ಸಂಘಟನೆಗಳ ಸಹಯೋಗದಲ್ಲಿ, ಯುವಕರಿಗಾಗಿ ಕಬಡ್ಡಿ ಪಂದ್ಯಾವಳಿ ಜರುಗಿಸಲಾಯಿತು. ಪಂದ್ಯಾವಳಿಯಲ್ಲಿ ಕಕ್ಕುಪ್ಪಿಯ ಯುವಕರ ತಂಡ ಪ್ರಥಮ ಸ್ಥಾನ ಪಡೆಯಿತು, ದ್ವಿತೀಯ ಬಹುಮಾನ ಅಮ್ಮನ ಕೇರಿಯ ಭಗತ್ ಸಿಂಗ್ ಬಾಯ್ಸ್ ತಂಡ ಪಡೆದುಕೊಂಡಿತು. ಪಂದ್ಯಾವಳಿಗೆ ಪ್ರಥಮ ಬಹುಮಾನದ ಟ್ರೋಪಿಯನ್ನು, ಸಿಜಿ ಮಂಜುನಾಥ್ ಗೌಡ ರವರು ಕೊಡುಗೆಯಾಗಿ ನೀಡಿರುತ್ತಾರೆ. ದ್ವಿತೀಯ ಬಹುಮಾನವನ್ನು, ಶಿಕ್ಷಕರಾದ ಮಂಜುನಾಥ ಸ್ವಾಮಿ…