ಶಿರಾಳಕೊಪ್ಪ:06/01/2024
ಪಟ್ಟಣದಲ್ಲಿ ಅಭಿವೃದ್ಧಿ ಆಗದೆ ಇರುವ ಕೆಲ ಪ್ರದೇಶಗಳಿಗೆ ಪ್ರಸಕ್ತ ವರ್ಷದ ಬಜೆಟ್ ನಲ್ಲಿ ಹಣ ಮೀಸಲಿಡಿಸಿ ಕಾಮಗಾರಿಗಳನ್ನು ಮಾಡುವಂತೆ ಆಗ್ರಹಿಸಿ ಸಾರ್ವಜನಿಕರಿಂದ ಪುರಸಭೆ ಅಧಿಕಾರಿಗಳು ಹಾಗೂ ಆಡಳಿತ ಮಂಡಳಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.
ಪಟ್ಟಣದ ಅನೇಕ ಪ್ರದೇಶಗಳು ಅಭಿವೃದ್ಧಿ ವಂಚಿತವಾಗಿರುವುದನ್ನು ಪ್ರಸ್ತಾಪ ಮಾಡಿ ಮನವಿ ಸಲ್ಲಿಸಿದ ಸ್ಥಳೀಯ ನಾಗರೀಕರು ಆದಷ್ಟು ಬೇಗ ಅಭಿವೃದ್ಧಿ ಕಾರ್ಯಗಳು ಮಾಡುವಂತೆ ಬೇಡಿಕೆ ಇಟ್ಟರು.
ಈ ಸಂಧರ್ಭದಲ್ಲಿ ಮಾತನಾಡಿದ ಸಾಮಾಜಿಕ ಹೋರಾಟಗಾರ ಅಬ್ದುಲ್ ನವೀದ್ ಪಟ್ಟಣದಲ್ಲಿ ವಿಶೇಷವಾಗಿ ಅಲ್ಪ ಸಂಖ್ಯಾತ ಸಮುದಾಯ ವಾಸವಿರುವ ಪ್ರದೇಶಗಳು ಅಭಿವೃದ್ಧಿ ವಂಚಿತವಾಗಿವೆ. ಪಟ್ಟಣದ ಹಳ್ಳೂರು ಖಾನಕೇರಿ ಏರಿಯಾ ಗಳಲ್ಲಿ ಫುಟ್ ಫಾತ್ ಟೈಲ್ಸ್ ಅಳವಡಿಕೆ ಯಾಗದೆ,ವೈಜ್ಞಾನಿಕ ಚರಂಡಿಗಳಿಲ್ಲದೆ ಜನ ಪರದಾಡುವಂತೆ ಆದರೆ ಮಠದಗದ್ದೆ, ದೊಡ್ಡಬ್ಯಾಂಡ್ ಕೇರಿ ಹಾಗೂ ಹನ್ನೊಂದನೇ ವಾರ್ಡ್ ನ ಕೇರಿಗಳಲ್ಲಿ ಓಡಾಡಲು ರಸ್ತೆಗಳಿಲ್ಲದೆ ಮಳೆಗಾಳದಲ್ಲ ವೃದ್ಧರು, ಶಾಲಾ ಮಕ್ಕಳು ತೀವ್ರ ಸಂಕಷ್ಟ ಎದುರಿಸುವಂತೆ ಆಗಿದೆ. ಬಸ್ಟ್ಯಾಂಡ್ ಪ್ರದೇಶದಲ್ಲಿ ಮಳೆ ನೀರು ಹೋಗಲು ಕಾಲುವೆ ಇಲ್ಲದ ಕಾರಣ ಮಳೆಗಾಲದಲ್ಲಿ ಮಳೆ ನೀರು ಗಾಂಧಿ ನಗರ ಪ್ರದೇಶದ ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿ ಯಾಗುತ್ತಿದೆ.ಪಟ್ಟಣದಲ್ಲಿ ಕೋಟಿ ಗಟ್ಟಲೆ ಸಾರ್ವಜನಿಕ ತೆರಿಗೆ ಹಣದಿಂದ ನಿರ್ಮಾಣ ಗೊಂಡಿರುವ ಫುಡ್ ಕೋರ್ಟ್ ಮತ್ತು ಮಿನಿ ಪಾರ್ಕ್ ಗಳು ಪಾಳು ಬಿದ್ದುದ್ದು ಪುರಸಭೆಯ ನಿರ್ಲಕ್ಷತನಕ್ಕೆ ಹಿಡಿದ ಕನ್ನಡಿಯಾಗಿದೆ ಎಂದರು.
ಮುಖಂಡರಾದ ಮಂಜುನಾಥಯ್ಯ ಮತ್ತು ಜಾಕಿರ್ ಹುಸೇನ್ ಮೆಕ್ಯಾನಿಕ್ ಮಾತನಾಡಿದರು.
ಪುರಸಭೆ ಅಧ್ಯಕ್ಷೆ ಮಮತಾ ನಿಂಗಪ್ಪ ಉಪಾಧ್ಯಕ್ಷ ಮುದಸ್ಸಿರ್ ಅಹ್ಮದ್, ಸದಸ್ಯ ಮಕ್ಬುಲ್ ಸಾಬ್, ಪರಿಸರ ಅಭಿಯಂತರ ರಾಘವೇಂದ್ರ ಹಿರೇಜಂಬೂರು ಮನವಿಯನ್ನು ಸ್ವೀಕರಿಸಿದರು.ಸಾರ್ವಜನಿಕ ಮನವಿಯನ್ನು ಸ್ವೀಕರಿಸಿ ಮಾತನಾಡಿದ ಅಧ್ಯಕ್ಷೆ ಮಮತಾ ನಿಂಗಪ್ಪ ಹಂತ ಹಂತ ವಾಗಿ ಎಲ್ಲಾ ಅಹವಾಲುಗಳ ಬಗ್ಗೆ ಗಮನ ಹರಿಸಿ ಸಮಸ್ಯೆಗಳನ್ನು ಬಗೆ ಹರಿಸುವುದಾಗಿ ಭರವಸೆ ನೀಡಿದರು. ಅವಿನಾಶ, ಪ್ರವೀಣ್,ಸುಹೈಲ್ ಶುಂಠಿ, ಮೃತಂಜಯ ವಾಟರ್, ತಾಹಿರ್, ಮಾಲತೇಶ್, ಅಶ್ವಾಕ್ ಅಹಮದ್, ಫೋಟೋ ಸ್ಟುಡಿಯೋ ಶೈಲು,ಮತ್ತಿತರರು ಇದ್ದರು.