ಶಿರಾಳಕೊಪ್ಪ:25/5/2025.
ಸರಕಾರದ ಮಹತ್ವಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಕಡಿಮೆ ದರದಲ್ಲಿ ಬಡವರ ಹಸಿವನ್ನು ನೀಗಿಸುವ ಕಾರ್ಯಕ್ರಮ ಇಂದಿರಾ ಕ್ಯಾಂಟೀನ್ ನ ಉದ್ಘಾಟನೆಯು ಭಾನುವಾರ ಶಾಲಾ ಮತ್ತು ಶಿಕ್ಷಣ ಸಚಿವ ಮಧು ಬಂಗಾರಪ್ಪ ನೆರವೇರಿಸಿದರು.
ಪಟ್ಟಣದ ಹೃದಯ ಭಾಗ, ಹಿರೇಕೆರೂರು ರಸ್ತೆಯ ನಾಡಕಛೇರಿ ಹತ್ತಿರ ಪುರಸಭೆ ವತಿಯಿಂದ ನೂತನವಾಗಿ ನಿರ್ಮಾಣಗೊಂಡಿರುವ ಇಂದಿರಾ ಕ್ಯಾಂಟೀನ್ ನಲ್ಲಿ ಉಪಹಾರ ಸೇವಿಸುವ ಮೂಲಕ ಉದ್ಘಾಟನೆ ಮಾಡಿದ ಸಚಿವರು ಶ್ರೀಮತಿ ಇಂದಿರಾಗಾಂಧಿಯವರ ಅವಧಿಯಲ್ಲಿ 20ಪಾಯಿಂಟ್ ಕಾರ್ಯಕ್ರಮದಡಿಯಲ್ಲಿ ಸುಮಾರಷ್ಟು ಜನಕಲ್ಯಾಣ ಕಾರ್ಯಕ್ರಮಗಳು ರೂಪಗೊಂಡಿದ್ದು ಅದರಲ್ಲೇ ಮಹತ್ವದ ಕಾರ್ಯಕ್ರಮ ಹಸಿವು ಮುಕ್ತ ಭಾರತ ಕಾರ್ಯಕ್ರಮವಾಗಿದೆ. ಇಂದಿರಾ ಕ್ಯಾಂಟೀನ್ ಗಳಿಂದಾಗಿ ಬಡವರಿಗೆ ನಿರ್ಗತಿಕರಿಗೆ ಅನುಕೊಲವಾಗಲಿದೆ.

ಈಗಾಗಲೇ ಸೊರಬ ಆನವಟ್ಟಿ, ಮತ್ತು ಶಿರಾಳಕೊಪ್ಪ ದಲ್ಲಿ ಇಂದಿರಾ ಕ್ಯಾಂಟೀನ್ ಗಳು ಪ್ರಾರಂಭವಾಗಿದ್ದು ಮುಂದಿನ ದಿನಗಳಲ್ಲಿ ಶಿಕಾರಿಪುರ ಪಟ್ಟಣದಲ್ಲಿ ಸಹ ಪ್ರಾರಂಭವಾಗಲಿದೆ. ವಿರೋಧ ಪಕ್ಷದವರು ಬರೀ ಬಡವರಿಗೆ ಆಶ್ವಾಸನೆ ನೀಡಿದರೆ ನಾವುಗಳು ಮಾಡಿ ತೋರಿಸಿದ್ದೇವೆ, ಸಾರ್ವಜನಿಕರಿಗೆ ಮೊಲಭೂತ ಸೌಕರ್ಯ ಗಳು ಕಲ್ಪಿಸಿದ್ದು ಕಾಂಗ್ರೆಸ್ ಸರ್ಕಾರ, ರೈಟ್ ಟು ಫುಡ್ ಅಕ್ಟ್, ರೈಟ್ ಟು ಎಜುಕೇಶನ್ ಆಕ್ಟ್ ನಂತಹ ಜನಪರ ಕಾರ್ಯಕ್ರಮಗಳು ತಂದಿದ್ದು ಕಾಂಗ್ರೆಸ್ ಸರಕಾರ ಆದರೆ ಬಿಜೆಪಿ ಯವರು ಸುಳ್ಳು ಸೋಷಿಯಲ್ ಮೀಡಿಯಾ ತಂದು ಜನರಲ್ಲಿ ಸುಳ್ಳು ಸುದ್ದಿಗಳು ಹರಡಿ ದೇಶ ಹಾಳು ಮಾಡುತ್ತಿದ್ದಾರೆ. ಸಮಾಜದಲ್ಲಿ ಎಲ್ಲರೂ ಪ್ರೀತಿ ವಿಶ್ವಾಸದಿಂದ ವಾಸಿಸುವ ಪರಿಕಲ್ಪನೆ ನಿರ್ಮಾಣವಾಗಬೇಕು.

ಶಾಲೆಗಳು ಇನ್ನೇನು ಪ್ರಾರಂಭವಾಗಲಿದ್ದು 51,000 ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವ ಗುರಿ ಸರ್ಕಾರ ಹೊಂದಿದೆ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳನ್ನು ಗುಣಮಟ್ಟದ ಶಿಕ್ಷಣದ ಜೊತೆಗೆ ಎಲ್ಲಾ ತರಹದ ಸೌಕರ್ಯಗಳನ್ನು ನೀಡಲಾಗುತ್ತಿದ್ದು ಪೋಷಕರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಲ್ಲೇ ಭರ್ತಿ ಮಾಡಬೇಕೆಂದು ಕರೆ ನೀಡಿದರು.
ಪುರಸಭೆ ಅಧ್ಯಕ್ಷೆ ಮಮತಾ ನಿಂಗಪ್ಪ, ಉಪಾಧ್ಯಕ್ಷ ಮುದಸ್ಸಿರ್ ಅಹ್ಮದ್, ಜಿಲ್ಲಾ ಯೋಜನಾ ನಿರ್ದೇಶಕರು ರಂಗ ಸ್ವಾಮಿ, ಸಹಾಯಕ ಕಾರ್ಯ ಪಾಲಕ ಅಭಿಯಂತರರು ಲಿಂಗರಾಜು, ರಾಜ್ಯ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪುಷ್ಪ ಶಿವಕುಮಾರ್, ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ನಾಗರಾಜ ಗೌಡ,ಮುಖ್ಯಾಧಿಕಾರಿ ಹೇಮಂತ್ ಕೆ.ಎನ್, ಕೆ ಪಿ ಸಿ ಸಿ ಸದಸ್ಯ ಗೋಣಿ ಮಾಲತೇಶ್, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಮಹಾಬಲ, ವ್ಯವಸ್ಥಾಪಕ ನಿರಂಜನ್ ಟಿ ಎಚ್, ಪರಿಸರ ಅಭಿಯಂತರ ರಾಘವೇಂದ್ರ ಹಿರೇಜಂಬೂರು, ಕಿರಿಯ ಅಭಿಯಂತರರಾದ ಶೇಖರ ನಾಯಕ್, ಸುಶ್ಮಿತಾ ಹಾಗೂ ಎಲ್ಲಾ ಪುರಸಭಾ ಸದಸ್ಯರು, ಊರಿನ ಮುಖಂಡರು, ಸಾರ್ವಜನಿಕರು ಇದ್ದರು.
ವರದಿ:ನವೀದ್ ಶಿರಾಳಕೊಪ್ಪ