ಶಿರಾಳಕೊಪ್ಪ :30-01-2025
ಪಟ್ಟಣದ ಶ್ರೀ ಬಸವೇಶ್ವರ ಸಹಕಾರ ಬ್ಯಾಂಕ್ ಮಾಜಿ ಅಧ್ಯಕ್ಷರು ಹಾಗೂ ಸೇವಾ ವಿಕಾಸ ಶಾಲೆಯ ನಿರ್ದೇಶಕ ರಾದ ಚಂದ್ರಮೌಳೇಶ್ವರರವರು ಇಂದು ವಿಧಿ ವಶರಾದರು.
ಕಳೆದ ಐದು ತಿಂಗಳು ಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಚಂದ್ರಮೌಳೇಶ್ವರ ರವರು ಇಂದು ದೈವಧೀನರಾಗಿದ್ದು ಅವರ ಅಪಾರ ಜನ ಅಭಿಮಾನಿಗಳು ಶೋಕದಲ್ಲಿದ್ದಾರೆ.
ಮೃತರಿಗೆ ಹೆಂಡತಿ ಸೇರಿದಂತೆ ಎರಡು ಹೆಣ್ಣು ಮಕ್ಕಳು ಮತ್ತು ಓರ್ವ ಪುತ್ರ ರಿದ್ದಾರೆ. ಇವರ ಅಂತ್ಯ ಕ್ರಿಯೆ ನಾಳೆ 31/1/2025 ರಂದು ಬೆಳಗ್ಗೆ 12 ಕ್ಕೆ ಪಟ್ಟಣದ ವೀರಶೈವ ರುದ್ರಭೂಮಿಯಲ್ಲಿ ನೆರವೇರಲಿದೆ.
ಶ್ರೀಯುತರ ಆತ್ಮಕ್ಕೆ ಶಾಂತಿ ಸಿಗಲೆಂದು ಪಟ್ಟಣದ ವಿರಕ್ತ ಮಠದ ಶ್ರೀ ಸಿದ್ದೇಶ್ವರ ಸ್ವಾಮೀಜಿ, ಹಾಗೂ ಸ್ಥಳೀಯ ಸಂಸದರಾದ ಬಿ ವೈ ರಾಘವೇಂದ್ರ, ಶಾಸಕರಾದ ಬಿ ವೈ ವಿಜಯೇಂದ್ರ ಹಾಗೂ ಮಾಜಿ ಮಲೆನಾಡು ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಪದ್ಮನಾಭ ಭಟ್ಟರು ಮತ್ತು ಕೆ ಎಸ್ ಗುರುಮೂರ್ತಿ ಸೇರಿದಂತೆ ಶಿರಾಳಕೊಪ್ಪ ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷರಾದ ಎಚ್ ಎಂ ಚಂದ್ರಶೇಖರ, ಲೊಕೇಶಪ್ಪ ರಟ್ಟೀಹಳ್ಳಿ, ಟಿ. ರಾಜು ಹಾಗೂ ಪಟ್ಟಣದ ಮುಖಂಡರಾದ ಅಗಡಿ ಅಶೋಕ್, ಇಂದೂಧರ, ಚನ್ನವೀರಪ್ಪ ಶೆಟ್ರು, ಮಂಚಿ ಶಿವಾನಂದ, ವೀರ ಶೈವ ಸಮಾಜದ ಅಧ್ಯಕ್ಷರಾದ ಎ. ಎಂ ಪ್ರಭು ಕುಮಾರ್ ಸ್ವಾಮಿ ಸಂತಾಪ ಸೋಚಿಸಿದರು..
ವರದಿ: ನವೀದ್ ಶಿರಾಳಕೊಪ್ಪ