ಶಿವಮೊಗ್ಗ ಜಿಲ್ಲೆಗೆ ಖಾಯಂ ವಕ್ಫ್ ಅಧಿಕಾರಿ ನೇಮಕ ಮಾಡಲು ಒತ್ತಾಯಿಸಿ ಮುಸ್ಲಿಂ ಮುಖಂಡರಿಂದ ಪ್ರತಿಭಟನೆ…

The Siasat News - Images

ಶಿವಮೊಗ್ಗ:04-03-2025

ಕಳೆದ ಎರಡು ವರ್ಷಗಳಿಂದ ಜಿಲ್ಲೆಯ ವಕ್ಫ್ ಬೋರ್ಡ್ ಕಚೇರಿಯಲ್ಲಿ ಖಾಯಂ ಅಧಿಕಾರಿ ಇಲ್ಲದ ಕಾರಣ ಜಿಲ್ಲೆಯಾದ್ಯಂತ ಅನೇಕ ಕಡೆ ಸಮಸ್ಯ ಗಳು ಎದುರಾಗಿರುವ ಪ್ರಸಂಗ ಗಳು ನಡೆದಿದೆ. ಕಚೇರಿಯ ಪ್ರಥಮ ದರ್ಜೆ ಸಹಾಯಕ ಮೆಹತಾಬ್ ರವರು ಖಾಯಂ ಅಧಿಕಾರಿ ಇಲ್ಲದ ಕಾರಣ ಹಂಗಾಮಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಸರಿಯಾಗಿ ಕೆಲಸ ಮಾಡುತ್ತಿಲ್ಲ ಸಾರ್ವಜನಿಕರು ಮತ್ತು ವಿದ್ಯಾರ್ಥಿ ಗಳು ಪರದಾಡುವ ಪರಿಸ್ಥಿತಿ ನಿರ್ಮಾಣ ಆಗಿದೆ ಆದಷ್ಟು ಬೇಗ ಖಾಯಂ ಆಗಿ ವಖ್ಫ್ ಅಧಿಕಾರಿಯನ್ನು ಸರಕಾರ ನೇಮಕ ಮಾಡಬೇಕೆಂದು ಪ್ರತಿಭಟನಕಾರರು ಆಗ್ರಹಿಸಿದರು.

ಕಳೆದ ವಾರವಷ್ಟೇ ರಾಜ್ಯ ವಖ್ಫ್ ಮತ್ತು ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆ ಸಚಿವ ಬಿ. ಜೆಡ್ ಜಮೀರ್ ಅಹ್ಮದ್ ಖಾನ್ ನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮುಸ್ಲಿಂ ಹಾಸ್ಟೆಲ್ ವಿದ್ಯಾರ್ಥಿ ಗಳು ಹಾಸ್ಟೆಲ್ ನಲ್ಲಿ ಗುಣಮಟ್ಟದ ಆಹಾರ ಸೇರಿದಂತೆ ಇನ್ನೂ ಅನೇಕ ಸಮಸ್ಯ ಗಳು ಮತ್ತು ಅಲ್ಲಿನ ವಾರ್ಡನ್ ನ ವರ್ತನೆ ಬಗ್ಗೆ ಸಚಿವರಿಗೆ ದೊರನ್ನು ನೀಡಿದ್ದರು.

The Siasat News - Images

“ಬದಲಿಸಿ ಬದಲಿಸಿ ಸರ್ವಧಿಕಾರಿ ಎಫ್ ಡಿ ಎ ಮಹತಾಬ್ ರನ್ನು ಬದಲಿಸಿ”, “ನೇಮಿಸಿ ನೇಮಿಸಿ ಖಾಯಂ ಅಧಿಕಾರಿಯನ್ನು ನೇಮಿಸಿ”ಬೇಕೇ ಬೇಕು ನ್ಯಾಯ ಬೇಕು ಎಂಬುವ ಘೋಷಣೆಗಳನ್ನು ಕೊಗುತ್ತ ನಗರದ ಮುಸ್ಲಿಂ ಹಾಸ್ಟೆಲ್ ಬಳಿರುವ ವಕ್ಫ್ ಕಚೇರಿ ಎದುರು ಮುಸ್ಲಿಂ ಮುಖಂಡರು ಪ್ರತಿಭಟನೆ ನಡೆಸಿದರು.

ಈ ಸಂಧರ್ಭದಲ್ಲಿ ಮಾತನಾಡಿದ ಮುಸ್ಲಿಂ ಹಾಸ್ಟಲಿನ ಮಾಜಿ ಕಾರ್ಯದರ್ಶಿ ನಾಸಿರ್ ಪ್ರಥಮ ದರ್ಜೆ ಸಹಾಯಕರಾಗಿರುವಂತಹ ವ್ಯಕ್ತಿಯನ್ನು ಇಡೀ ಜಿಲ್ಲೆಯ ಜವಾಬ್ದಾರಿ ನೀಡಿದ್ದು ಸರಿಯಲ್ಲ, ಸರ್ವಾಧಿಕಾರಿ ಧೋರಣೆ, ದುರ್ವರ್ತನೆ ಮತ್ತು ಸಮುದಾಯದಲ್ಲಿ ಗುಂಪುಗಾರಿಕೆಯನ್ನು ಸೃಷ್ಟಿ ಮಾಡುವ ಕೆಲಸ ಹಂಗಾಮಿ ಅಧಿಕಾರಿ ಮಾಡುತ್ತಿದ್ದಾರೆ.

ಬೇರೆ ಬೇರೆ ಪಟ್ಟಣಗಳಿಂದ ವಿದ್ಯಾಭ್ಯಾಸದ ಪ್ರಯುಕ್ತ ಬರುವ ಸಮುದಾಯದ ಮಕ್ಕಳು ಒಳ್ಳೆ ಊಟಕ್ಕೂ ಪರದಾಡುವಂತೆ ಆಗಿದೆ. ರಂಜಾನ್ ಸಂದರ್ಭದಲ್ಲಿ ನೀಡಲಾಗುತ್ತಿದ್ದ ಹಣ್ಣು ಹಂಪಲು ಮತ್ತು ಬೆಳಗ್ಗಿನ ಜಾವದ ಭೋಜನ ಸರಿಯಾಗಿ ಲಭ್ಯ ವಿಲ್ಲದ ಕಾರಣ ವಿದ್ಯಾರ್ಥಿ ಗಳು ಶಾಹ್ ಅಲೀಂ ದೀವಾನ್ ದರ್ಗಾ ಮತ್ತು ಬೇರೆ ಬೇರೆ ಮಸೀದಿಗಳಿಗೆ ಹೋಗುತ್ತಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಹಾಸ್ಟೆಲ್ ಗೆ ಆದಾಯದ ಕೊರತೆ ಏನಿಲ್ಲ ಆದರೆ ಇವೆಲ್ಲ ಅವಾಂತರ ವಕ್ಫ್ ನ ಹಂಗಾಮಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಮೆಹತಾಬ್ ರವರು ಸೃಷ್ಟಿ ಮಾಡಿದ್ದು ಹಿಟ್ಲರ್ ನಂತೆ ವರ್ತನೆ ಮಾಡುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಎಂ ಎಲ್ ಸಿ ಬಲ್ಕಿಸ್ ಬಾನು ಸೇರಿದಂತೆ ಕರ್ನಾಟಕ ಸರ್ಕಾರಕ್ಕೆ ಆದಷ್ಟು ಬೇಗ ನಮ್ಮ ಜಿಲ್ಲೆಗೆ ವಕ್ಫ್ ಕಾನೂನಿನಂತೆ ಕೆಲಸ ಮಾಡುವಂತಹ ಒಬ್ಬ ಖಾಯಂ ಅಧಿಕಾರಿಯನ್ನು ನೇಮಕ ಮಾಡಬೇಕೆಂದು ಕೇಳಿಕೊಳ್ಳುತ್ತೇವೆ ಎಂದರು.

ವಕ್ಫ್ ಬೋರ್ಡಿನ ಮಾಜಿ ಉಪಾಧ್ಯಕ್ಷ ರಹ್ಮತುಲ್ಲ ರಹ್ಮತಿ,ಮುಸ್ಲಿಂ ಹಾಸ್ಟೆಲ್ ಮ್ಯಾನೇಜ್ಮೆಂಟ್ ಸಮಿತಿಯ ಮಾಜಿ ಅಧ್ಯಕ್ಷ ಆರಿಫುಲ್ಲಾಹ್, ಮುಖಂಡರಾದ ಮುಹಮ್ಮದ್ ಸಲೀಂ ಇಂಡಿಯನ್, ಮುಜೀಬ್ ಅಹ್ಮದ್ ಮತ್ತಿತರರು ಇದ್ದರು.

ವರದಿ: ನವೀದ್ ಶಿರಾಳಕೊಪ್ಪ

Share the news!

Leave a Reply

Your email address will not be published. Required fields are marked *