ಶಿರಾಳಕೊಪ್ಪ:25-01-2025
ಪಟ್ಟಣದ ಮುಸ್ಲಿಂ ಸಮುದಾಯದಲ್ಲಿ ಲಂಗಡೆ ಮೌಜಿನ್ ಸಾಬ್ ಎಂದೇ ಸುಪ್ರಸಿದ್ದಿ ಪಡೆದಿದ್ದ ಊರಿನ ಜಾಮೀಯಾ ಮಸೀದಿಯ ಮೌಜಿನ್ (ಮಸೀದಿಯ ಆರೈಕೆ ಮಾಡುವವ) ಶ್ರೀ ಸಾಬ್ಜಾನ್ ಸಾಬ್ ರವರು ದಿನಾಂಕ 22/1/2025 ಬುಧವಾರ ದಂದು ತೀರಿಕೊಂಡಿದ್ದು ಶಿಕಾರಿಪುರ ತಾಲ್ಲೂಕಿನಾದ್ಯಂತ ಮೃತರ ಅನೇಕ ಮಂದಿ ಅಭಿಮಾನಿಗಳಿಗೆ ಘಾಸಿ ಉಂಟು ಮಾಡಿದೆ.
ಕಳೆದ ಎರಡು ವರ್ಷಗಳಿಂದ ತೀವ್ರ ಅನಾರೋಗ್ಯ ದಿಂದ ಬಳಲುತ್ತಿದ್ದ ಸಾಬ್ಜಾನ್ ಸಾಹೇಬರು ಸುಮಾರು 45 ವರ್ಷ ಪಟ್ಟಣದ ಜಾಮೀಯಾ ಮಸೀದಿಯ ಆರೈಕೆ ಮತ್ತು ಧರ್ಮ ಕಾರ್ಯ ಮಾಡಿದ್ದು ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ.
1950 ರಂದು ಶಿಕಾರಿಪುರ ತಾಲ್ಲೂಕಿನ ಉಡುಗಣಿ ಹೋಬಳಿ ಉಡುಗಣಿ ಗ್ರಾಮದ ಬಡ ಕುಟುಂಬದಲ್ಲಿ ಅಂಗವೈಕಲ್ಯರಾಗಿ ಹುಟ್ಟಿದ ಶ್ರೀಯುತರು ಕುಟುಂಬ ನಿರ್ವಹಣೆಗಾಗಿ ಸಾಮಿಲ್ ಸೇರಿದಂತೆ ಅನೇಕ ಕಡೆಗಳಲ್ಲಿ ಕೆಲಸ ಮಾಡಿದ್ದು ನಂತರದಲ್ಲಿ 1973 ರಲ್ಲಿ ಪಟ್ಟಣದ ಜಾಮೀಯಾ ಮಸೀದಿಯಲ್ಲಿ ಮೌಜಿನ್ ಆಗಿ ಕೆಲಸಕ್ಕೆ ಸೇರಿಕೊಂಡರು.
ತೀರಾ ಕಡಿಮೆ ಸಂಬಳದೊಂದಿಗೆ ಮಸೀದಿಯ ನಿರ್ವಹಣೆ ಕೆಲಸಕ್ಕೆ ಸೇರಿಕೊಂಡ ಇವರು ಪಟ್ಟಣದ ಅಲ್ ಅಮೀನ್ ಶಾಲೆಯಲ್ಲಿ ಪೀವನ್ ಆಗಿ ಕೆಲಸ ಮಾಡಿದ್ದು ಉಂಟು.
ಶ್ರೀಯುತರಿಗೆ ಹೆಂಡತಿ ತಾಹೀರಾ ಜಾನ್ ಸೇರಿದಂತೆ 4ಜನಹೆಣ್ಣುಮಕ್ಕಳು ಹಾಗೂ 2ಜನ ಗಂಡು ಮಕ್ಕಳಿದ್ದಾರೆ.
ಜಿಲ್ಲೆಯ ಸಂಸದ ಬಿ ವೈ ರಾಘವೇಂದ್ರ ಸೇರಿದಂತೆ , ಬಜ್ಮೆ ಉಮ್ಮೀದ್ ಅದೀಬಿ ಸಾಂಸ್ಕೃತಿಕ ವೇದಿಕೆ ಶಿರಾಳಕೊಪ್ಪದ ಸದಸ್ಯರು, ಪಟ್ಟಣದ ಪ್ರಮುಖರು ಹಾಗೂ ಹಿತೈಷಿ ಗಳು ಸಂತಾಪ ಸೋಚಿಸಿದ್ದಾರೆ.
ವರದಿ: ನವೀದ್ ಶಿರಾಳಕೊಪ್ಪ