ಬಂದೋಕು ತರಬೇತಿ ಪಡೆದಂತಹ ಸಾರ್ವಜನಿಕರು ಅರ್ಧ ಪೋಲೀಸರು- ಮಧು ಬಂಗಾರಪ್ಪ….

The Siasat News - Images

ಸೊರಬ:14-02-2025

ಪೊಲೀಸ್ ಇಲಾಖೆ ವತಿಯಿಂದ ಸಾರ್ವಜನಿಕರಿಗೆ ನೀಡುವ ಬಂದೂಕು ತರಬೇತಿ ಶಿಬಿರ ಗಳಲ್ಲಿ ನುರಿತ ತರಬೇತಿ ದಾರರು ಪಬ್ಲಿಕ್ ಗೆ ಬಂದೋಕು ತರಬೇತಿ ಜೊತೆಗೆ ಪೋಲೀಸರ ಕೆಲಸ ಮತ್ತು ಶಿಸ್ತಿನ ಬಗ್ಗೆಯೂ ಪಾಠ ಮಾಡುವ ಮೂಲಕ ತರಬೇತಿಗೆ ಒಳಗಾದ ಸಾರ್ವಜನಿಕರಿಗೆ ಜವಾಬ್ದಾರಿಯನ್ನು ನೀಡಿ ಅವರನ್ನು ಅರ್ಧ ಪೋಲೀಸರಂತೆ ತಯಾರು ಮಾಡುತ್ತಾರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅಭಿಪ್ರಾಯ ವ್ಯಕ್ತ ಪಡಿಸಿದರು.

The Siasat News - Images

ಪಟ್ಟಣದ ರಂಗ ಮಂದಿರದಲ್ಲಿ ನಡೆದ ಸಾರ್ವಜನಿಕ ಬಂದೋಕು ತರಬೇತಿ ಶಿಬಿರ 2025 ರ ಸಮಾರೋಪ ಸಮಾರಂಭದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು ಇಂತಹ ಶಿಬಿರ ಗಳಲ್ಲಿ ಪಬ್ಲಿಕ್ ಗೆ ತರಬೇತಿ ಜೊತೆ ಗೆ ಸಾಮಾಜಿಕ ಜವಾಬ್ದಾರಿ ಕೊಡ ನೀಡಲಾಗಿರುತ್ತದೆ, ಇಲ್ಲಿ ಕಲಿಸಿದ ಶಿಸ್ತು ಮತ್ತು ನಿಯಮಗಳನ್ನು ಜೀವನದಲ್ಲಿ ಅಳವಡಿಸಿಕೊಂಡು, ಆಯುಧಗಳನ್ನು ಜವಾಬ್ದಾರಿಯುತವಾಗಿ ಬಳಕೆ ಮಾಡಿ ಎಂದು ಕರೆ ನೀಡಿದರು.

ಸಣ್ಣ ನೀರಾವರಿ ಸಚಿವ ಬೋಸುರಾಜು ಮಾತನಾಡಿ ಸಾರ್ವಜನಿಕ ಜೀವನದಲ್ಲಿ ಸಮಾಜಘಾತಕ ಶಕ್ತಿಗಳನ್ನು ಮಟ್ಟ ಹಾಕಲು ಅಹಿತಕರ ಘಟನೆಗಳು ನಡೆದಂತೆ ತಾಳ್ಮೆಯಿಂದ ವರ್ತಿಸಲು ಇಂಥ ಕಲಿಕೆ ಉತ್ತಮ ವೇದಿಕೆಯಾಗಿದೆ ಎಂದರು.

The Siasat News - Images

ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಜಿ ಕೆ ಮಾತನಾಡಿ ಪೊಲೀಸ್ ಇಲಾಖೆಯು ಸಮಾಜದ ಒಂದು ಭಾಗ. ಇಲಾಖೆಯು 24 ಗಂಟೆಯೂ ಜನಗಳ ಸೇವೆಗೆ ತಯಾರಾಗಿತ್ತದೆ ಸಾರ್ವಜನಿಕರಲ್ಲಿ ಪೋಲೀಸರ ಬಗ್ಗೆ ಇರುವ ತಾತ್ಸಾರ ಮನೋಭಾವನೆಯನ್ನು ಹೋಗಲಾಡಿಸಲು ಕಳೆದ 10/12ದಿನಗಳಿಂದ ಪೋಲೀಸರ ಜೊತೆ ಇದ್ದು ತರಬೇತಿ ಪಡೆದ ಶಿಬಿರಾರ್ಥಿಗಳಾದ ನೀವುಗಳು ಕೆಲಸ ಮಾಡಬೇಕು. ಸಮಾಜದಲ್ಲಿ ನಡೆಯುವ ಅಹಿತಕರ ಹಾಗೂ ಖಾನೂನು ಬಾಹಿರ ಚಟುವಟಿಕೆಗಳ ಮಾಹಿತಿಯನ್ನು ಇಲಾಖೆಯೊಂದಿಗೆ ಹಂಚಿಕೊಂಡು ಇಲಾಖೆಗೆ ಸಹಾಕರಾಗಿ ಉತ್ತಮ ಪ್ರಜೆಗಳಾಗಿ ತಮ್ಮ ಹೊಣೆಗಾರಿಕೆಯನ್ನು ಮೆರೆಯಬೇಕು. ಆಯುಧಗಳನ್ನು ಯಾವುದೇ ಕಾನೂನು ಬಾಹಿರ ಚಟುವಟಿಕೆ ಗಳಿಗೆ ಬಳಸದೆ ನಿಮ್ಮ, ನಿಮ್ಮ ಕುಟುಂಬ ಮತ್ತು ನಿಮ್ಮ ಆಸ್ತಿ ಗಳ ರಕ್ಷಣೆಗೆ ಮಾತ್ರ ಬಳಸಬೇಕು. ಉತ್ತಮ ನಾಗರೀಕರ ಮೊದಲ ಗುಣ ಶಿಸ್ತು ಬದ್ದ ಜೀವನ ಆಗಿದ್ದು ತರಬೇತಿಯಲ್ಲಿ ಕಲಿಸಿದಂತಹ ಶಿಸ್ತು ಮತ್ತು ನಿಯಮಗಳನ್ನು ಪಾಲಿಸಿ ಮಾನಸಿಕ, ದೈಹಿಕ ಹಾಗೂ ಸಾಮಾಜಿಕ ಆರೋಗ್ಯವನ್ನು ಕಪಾಡಿಕೊಳ್ಳಬಹುದೆಂದರು.

ತರಬೇತಿ ನಂತರ ನಡೆದ ಫೈರಿಂಗ್ ಸ್ಪರ್ಧೆಯಲ್ಲಿ ಹತ್ತಕ್ಕೆ ಹತ್ತು ಗುಂಡುಗಳನ್ನು ಬುಲ್ ಗೆ ಹೊಡೆದು ಸಾಧನೆ ಮೆರೆದ ಶಿರಾಳಕೊಪ್ಪದ ಸುನಿಲ್ ಕುಮಾರ್ ಎಚ್ ಮೊದಲ ಬಹುಮಾನವನ್ನು ಪಡೆದರು.

The Siasat News - Images

ಸುಮಾರು 200ಕ್ಕೂ ಹೆಚ್ಚು ಶಿಬಿರಾರ್ಥಿ ಗಳನ್ನು ಈ ಸಂಧರ್ಭದಲ್ಲಿ ಪ್ರಮಾಣ ಪತ್ರಗಳನ್ನು ವಿತರಣೆ ಮಾಡಲಾಯಿತು.

ಕೃಷ್ಣ ಮೂರ್ತಿ, ಪೊಲೀಸ್ ಉಪಾಧೀಕ್ಷರು ಜಿಲ್ಲಾ ಸಶಸ್ತ್ರ ಮೀಸಲು ಪಡೆ ಶಿವಮೊಗ್ಗ ಜಿಲ್ಲೆ, ಕೇಶವ್ ಪೊಲೀಸ್ ಉಪಾಧೀಕ್ಷರು ಶಿಕಾರಿಪುರ ಉಪ ವಿಭಾಗ, ಉಪ ವಿಭಾಗಾಧಿಕಾರಿ ಸಾಗರ ದೃಷ್ಟಿ ಜೈಸ್ವಾಲ್, ರಾಜಶೇಖರ್ ವೃತ್ತ ನಿರೀಕ್ಷಕರು ಸೊರಬ, ನಾಗರಾಜ್ ಪಿ ಎಸ್ ಐ ಸೊರಬ, ತರಬೇತುದಾರ ರಾದ ಮಂಜುನಾಥ್ ಬಿದರಿಕೊಪ್ಪ ಆರಕ್ಷಕ ಉಪ ನಿರೀಕ್ಷಕರು ಸಶಸ್ತ್ರ ಮೀಸಲು ಪಡೆ, ಹಾಗೂ ಮುಖ್ಯ ಪೇದೆಗಳಾದ ಪ್ರವೀಣ್ ಕುಮಾರ್ ಬಿ ಎನ್, ಲಕ್ಷ್ಮಿಕಾಂತ್ ಎಂ, ಹಾಗೂ ರಾಘವೇಂದ್ರ ಕೆ ಎಚ್ ಇದ್ದರು.

ವರದಿ: ನವೀದ್ ಶಿರಾಳಕೊಪ್ಪ.

Share the news!

Leave a Reply

Your email address will not be published. Required fields are marked *