ತಕ್ಷಣ ಶಿಕಾರಿಪುರ ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸಿ….ರೈತ ಸಂಘ ಆಗ್ರಹ.

The Siasat News - Images

ಶಿರಾಳಕೊಪ್ಪ: 27-01-2025

ಹೋದ ವರ್ಷ ಸುರಿದ ಭಾರೀ ಮಳೆಯಿಂದಾಗಿ ಜಿಲ್ಲೆಯ ಎಲ್ಲಾ ಜಲಾಶಯಗಳು ಬಹುತೇಕ ತುಂಬಿವೆ ಆದರೂ ಕೊಡ ಇಲ್ಲಿಯ ತನಕವೂ ತಾಲ್ಲೂಕಿನ ತಾಳಗುಂದ, ಹೊಸೂರು ಹಾಗೂ ಉಡುಗಣಿ ಹೋಬಳಿಗಳ ಕೆರೆಗಳಿಗೆ ನೀರಾವರಿ ಇಲಾಖೆ ವತಿಯಿಂದ ಕೆರೆ ತುಂಬುವ ಕೆಲಸ ಆಗಿಲ್ಲ ಎಂದು ದೊರಿದ ಶಿಕಾರಿಪುರ ತಾಲ್ಲೂಕು ರೈತ ಸಂಘಟನೆಯ ಸದಸ್ಯರು ಸಂಘದ ಗೌರವ ಅಧ್ಯಕ್ಷ ಪ್ಯಾಟಿ ಈರಣ್ಣ ನೇತೃತ್ವದಲ್ಲಿ ಉಪ ತಹಸೀಲ್ದಾರ್ ರವರಿಗೆ ಮನವಿ ನೀಡಿದರು.

ತಾಲ್ಲೂಕಿನ ಉಡುಗಣಿ, ಹೊಸೂರು ಮತ್ತು ತಾಳಗುಂದ ಹೋಬಳಿಗಳ ಹಳ್ಳಿಗಳಲ್ಲಿ ಬೇಸಿಗೆ ಹೊತ್ತಲ್ಲಿ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಮೆಕ್ಕೆಜೋಳ, ಭತ್ತ ಹಾಗೂ ಅಡಿಕೆ ತೋಟಗಳು ಒಣಗುತ್ತಿವೆ ತಾಲ್ಲೂಕಿನ ದಂಡಾಧಿಕಾರಿಗಳು ಮತ್ತು ನೀರಾವರಿ ಇಲಾಖೆಯವರು ಆದಷ್ಟು ಬೇಗ ಕೆರೆಗಳಿಗೆ ನೀರು ತುಂಬಿಸುವ ಆಲೋಚನೆ ಮಾಡಬೇಕೆಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

The Siasat News - Images

ಈ ಸಂಧರ್ಭದಲ್ಲಿ ಮುಖಂಡರಾದ ರಾಜಶೇಖರಪ್ಪ ಮುಗಳಿಕೊಪ್ಪ, ಪುಟ್ಟನ ಗೌಡ್ರು, ರಾಜು ತಾಳಗುಂದ ಪ್ರದೀಪ್, ಶಾಂತಪ್ಪ, ಮತ್ತಿತರರು ಇದ್ದರು.

ವರದಿ: ನವೀದ್ ಶಿರಾಳಕೊಪ್ಪ

Share the news!

Leave a Reply

Your email address will not be published. Required fields are marked *