ಶಿರಾಳಕೊಪ್ಪ:03/04/2025
ಪಟ್ಟಣದ ಮಧ್ಯ ಭಾಗದಲ್ಲಿ, ನಾಡ ಕಛೇರಿ ಪುರಸಭೆ ಮತ್ತು ಪೊಲೀಸ್ ಠಾಣಿಯ ಸಮೀಪವಿರುವ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಗಂಡು ಮಕ್ಕಳ ಶಾಲೆಯನ್ನು ರಾತ್ರಿ ಹೊತ್ತು ಕುಡುಕರು ಕುಡುಕರ ಅಡ್ಡ ಮಾಡಿಕೊಂಡಿದ್ದಾರೆ.

ಹೌದು…..,
ಪಟ್ಟಣದ ಹೃದಯ ಭಾಗದಲ್ಲಿರುವ ಶಾಲೆಯ ಆವರಣ ದಲ್ಲಿ ರಾತ್ರಿ ಹೊತ್ತು ಬ್ಯಾಡಾದ ಚಟುವಟಿಕೆಗಳು ಆಗುತ್ತಿದ್ದು ಬೆಳಗ್ಗೆ ಶಾಲೆಗೆ ಬರುವ ಶಿಕ್ಷಕರಿಗೆ, ಮಕ್ಕಳಿಗೆ ತೊಂದರೆ ಆಗುತ್ತಿದೆ.
ಪ್ರತಿದಿನ ಕುಡುಕರಿಗೆ ಹಿಡಿ ಶಾಪ ಹಾಕಿಕೊಂಡೇ ಶಾಲೆಯ ಬೀಗ ತೆಗೆತುವುವದು ಶಿಕ್ಷಕರ ನಿತ್ಯದ ಕೆಲಸ ಆಗಿದೆ.
ಮಂಗಳವಾರದಂದು ರಾತ್ರಿ ಶಾಲೆಯ ಕಟ್ಟೆಯ ಮೇಲೆ ಕುಳಿತು ಎಣ್ಣೆ ಹೊಡೆದ ಕುಡುಕರು ಶಾಲೆಯ ಆಫೀಸ್ ರೋಮಿನ ಬೀಗವನ್ನು ಮುರಿದು ಕಳ್ಳತನ ಮಾಡಲು ಪ್ರಯತ್ನ ಪಟ್ಟಿದ್ದಾರೆಂದು ಶಾಲೆಯ ಮುಖ್ಯ ಶಿಕ್ಷಕಿ ಪೋಲೀಸರಿಗೆ ದೊರನ್ನು ನೀಡಿದ್ದಾರೆ.
ಈ ವಿಚಾರವಾಗಿ ಮಾಧ್ಯಮ ದವರೊಂದಿಗೆ ಮಾತನಾಡಿದ ಶಾಲೆಯ ಮುಖ್ಯ ಶಿಕ್ಷಕಿ ಗುತ್ತ್ಯಮ್ಮ. ಬಿ ಪ್ರತಿ ದಿನ ಶಾಲೆ ಪ್ರಾರಂಭಿಸುವ ಮೊದಲು ಇಲ್ಲಿ ಬಿದ್ದಂತಹ ಬೀರು ಬ್ರಾಂಡಿ ಬಾಟಲ್ ಗಳು, ಪ್ಲಾಸ್ಟಿಕ್ ಗ್ಲಾಸ್ ಗಳು ಮತ್ತು ಗುಟ್ಕಾ, ಎಲೆ ಆಡಿಕೆ ಕಲೆಗಳನ್ನು ಸ್ವಚ್ಛಗೊಳಿಸಿ ಶಾಲೆಯನ್ನು ಪ್ರಾರಂಭ ಮಾಡುವುದು ನಮ್ಮ ನಿತ್ಯದ ಕೆಲಸ ವಾಗಿದೆ.
ಈ ವಿಚಾರವಾಗಿ ಪೋಲೀಸರಿಗೆ ದೊರು ನೀಡಿದರೆ ಯಾರು ಮಾಡಿದ್ದಾರೆ ಅವರ ಹೆಸರನ್ನು ಉಲ್ಲೇಖಸಿ ದೊರು ನೀಡಿ ಎನ್ನುತ್ತಾರೆ ನಾವು ಯಾರ ಮೇಲೆ ಅಂತ ದೊರು ಕೊಡೋವುದು…??
ಶಾಲೆ ಮುಗಿದ ನಂತರ ನಾವುಗಳು ಯಾರೂ ಸಹ ಇಲ್ಲ ಇರುವುದಿಲ್ಲ. ಶಾಲೆಯಲ್ಲಿದ್ದ ಕಬ್ಬಿಣದ ಪೈಪು ಗಳು ಸೇರಿದಂತೆ ಅನೇಕ ವಸ್ತುಗಳು ಕಳವು ಆಗಿದ್ದಾವೆ. ಶಾಲೆಯ ಕಟ್ಟೆಗೆ ಹಾಕಲಾದ ಟೈಲ್ಸ್ ಗಳನ್ನು ಕಿಡಿಗೇಡಿ ಗಳು ಹೊಡೆದು, ಗೇಟಿನ ಬೀಗವನ್ನು ಮುರಿದು ಹೋಗಿದ್ದಾರೆಂದು ತಮ್ಮ ಅಳಲು ತೋಡಿಕೊಂಡರು.
ಸಮಾಜ ಸೇವಕ ರಾಘವೇಂದ್ರ ಮೂಗುವೀರ ಮಾತನಾಡಿ ಶಾಲೆಯ ಕಾಂಪೌಂಡ್ ನ ಎತ್ತರ ತೀರಾ ಕಡಿಮೆ ಮತ್ತು ಶಾಲೆಯ ಹಿಂದಿನ ಗೋಡೆ ಪಕ್ಕದಲ್ಲಿ ಮರಳು, ಜೆಲ್ಲಿ ಮತ್ತು ಬಂಬೂ ಗಳು ಇರುವುದರಿಂದ

ಅವುಗಳನ್ನು ಹತ್ತಿ ಶಾಲೆಯ ಅವರಣದೊಳಗೆ ಬರಲು ಅನುಕೂಲ ಆಗುತ್ತಿದೆ ಮೊದಲು ಇದನ್ನೆಲ್ಲಾ ತೆಗೆಯ ಬೇಕು ಎಂದರು.
ಶಿಕ್ಷಕರ ಮತ್ತು ಪೋಷಕರು ಸ್ಥಳೀಯ ಪುರಸಭೆಗೆ ಈ ವಿಚಾರವಾಗಿ ದೊರನ್ನು ಸಲ್ಲಿಸಿದ್ದು ಪುರಸಭಾ ಅಧ್ಯಕ್ಷೆ , ಸದಸ್ಯೆ ನಿರ್ಮಲ ಪ್ರಕಾಶ್ ಹಾಗೂ ವ್ಯವಸ್ಥಾಪಕ ನಿರಂಜನ್ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಅಧ್ಯಕ್ಷೆ ಮಮತಾ ನಿಂಗಪ್ಪ ಮಾತನಾಡಿ ಸ್ವಚ್ಛತೆ ಮತ್ತು ಗೋಡೆ ಪಕ್ಕದಲ್ಲಿನ ಜೆಲ್ಲಿ ರಾಶಿ ಸೇರಿದಂತೆ ಪುರಸಭೆ ವತಿಯಿಂದ ಬಗೆ ಹರಿಸಬಹುದಾದ ಎಲ್ಲಾ ಸಮಸ್ಯಗಳನ್ನು ಶೀಘ್ರ ದಲ್ಲೇ ಸರಿ ಪಡಿಸಲಾಗುವದು ಮತ್ತು ಶಿಕ್ಷಣ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಗಮನಕ್ಕೂ ಸಹ ತರುವುದಾಗಿ ಭರವಸೆ ನೀಡಿದರು.ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷ ರಘು, ಉಪಾಧ್ಯಕ್ಷೆ ನಾಜಿಯಾ, ಶಿಕ್ಷಕರಾದ ಶರತ್ ಕುಮಾರ್, ಪ್ರಕಾಶ್, ರೇಣುಕಮ್ಮ ಎಲ್ಲಮ್ಮ, ಅನುರಾಧ, ಜಯಶ್ರೀ ಮತ್ತು ಅಪಾರ ಸಂಖ್ಯೆಯಲ್ಲಿ ಪೋಷಕರು ಇದ್ದರು.
ವರದಿ: ನವೀದ್ ಶಿರಾಳಕೊಪ್ಪ