ಕರಾಟೆಯಲ್ಲಿ ಸಮಗ್ರ ಪ್ರಶಸ್ತಿ ಪಡೆದು ಕೀರ್ತಿ ತಂದ ಶ್ರೀಧರ ಇಂಟರ್ನ್ಯಾಷನಲ್ ಶಾಲೆಯ ವಿದ್ಯಾರ್ಥಿಗಳು….

The Siasat News - Images

ಶಿರಾಳಕೊಪ್ಪ:07/01/2025

ದಿನಾಂಕ 5/01/2025 ಭಾನುವಾರದಂದು ಶಿವಮೊಗ್ಗದ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ 2ನೇ ಆಲ್ ಇಂಡಿಯಾ ರಾಷ್ಟ್ರಮಟ್ಟದ ಮುಕ್ತ ಕರಾಟೆ ಚಾಂಪಿಯನ್ಶಿಪ್ – 2025 ಸಹ್ಯಾದ್ರಿ ಶಿವಮೊಗ್ಗ ಜಿಲ್ಲಾ ಕರಾಟೆ ಅಸೋಸಿಯೇಷನ್ ಮತ್ತು ಅಖಿಲ ಕರ್ನಾಟಕ ಕರಾಟೆ ಅಸೋಸಿಯೇಷನ್ ಇವರ ಸಹಯೋಗದೊಂದಿಗೆ ನಡೆದಂತಹ ಕ್ರೀಡಾಕೂಟದಲ್ಲಿ ಏಕಲವ್ಯ ಕರಾಟೆ ಕ್ಲಬ್ ನ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿಯನ್ನು ಪಡೆದು ಕೀರ್ತಿಯನ್ನು ತಂದಿರುತ್ತಾರೆ.

ಹತ್ತಿರದ ಶ್ರೀಧರ್ ಇಂಟರ್ನ್ಯಾಷನಲ್ ಶಾಲೆಯ ವಿದ್ಯಾರ್ಥಿಗಳಾದ ಭಗತ್ ಎಂಎಸ್ . ಸಾಯೀಮ್ ಶುಂಠಿ,

The Siasat News - Images

ಉದಯ .ಅವನೀಶ್ ವೇದಾಂತ್ .ತನುಷ್ ಚಕ್ರವರ್ತಿ ಡಿ ಎಂ ವಿದ್ಯಾರ್ಥಿಗಳು ಕಟ ಮತ್ತು ಕುಮುಟೆ ವಿಭಾಗದಲ್ಲಿ ಸಮಗ್ರ ಪ್ರಶಸ್ತಿಯನ್ನು ಪಡೆದಿರುತ್ತಾರೆ.

ಅಂತರಾಷ್ಟ್ರ ಮಟ್ಟದ ಕರಾಟೆ ವಿಶ್ವ ಕರಾಟೆ ಚಾಂಪಿಯನ್ಶಿಪ್ ಬಂಗಾರದ ಪದಕ ವಿಜೇತರು ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ

The Siasat News - Images

ಜಿಲ್ಲಾ ಜುಡೋ ಎನ್‌ಐಎಸ್ಎನ್ಎಸ್ ತರಬೇತಿದಾರರೂ ಮತ್ತು ಕರಾಟೆ ತರಬೇತಿದಾರರು ಆದ ಶ್ರೀ ಮಿಥುನ್ ರವರು ಸದರಿ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಿದ್ದು ಸಾರವಾಜನಿಕರಲ್ಲಿ ಪ್ರಶಂಸಗೆ ಪಾತ್ರರಾಗಿದ್ದಾರೆ.

Share the news!

Leave a Reply

Your email address will not be published. Required fields are marked *