ಶಿರಾಳಕೊಪ್ಪ:30-03-2025
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜರುಗುವ ಮನೊರಂಜನೆ ಸಂಸ್ಕಾರ ನೀಡುವಂತಿರಬೇಕು ಎಂದು ಜಾನಪದ ಕಲಾವಿದ ಗುರುರಾಜ್ ಹೊಸಕೋಟೆ ಅಭಿಪ್ರಾಯಪಟ್ಟರು.
ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಭಾನುವಾರ ದಸರಾ ಉತ್ಸವ ಸಮಿತಿಯವರು ಆಯೋಗಿಸಿದ್ದ ಯುಗಾದಿ ಉತ್ಸವ ಕಾರ್ಯಕ್ರಮ ನೀಡಿ ಮಾತನಾಡಿದರು. ಇದುವರೆಗೂ ರಾಜ್ಯಾತ್ಯಂತ 13ಸಾವಿರ ಕಾರ್ಯಕ್ರಮ ನೀಡಿದ್ದೇವೆ. ನಿಮ್ಮ ಮಕ್ಕಳ ಕಲೆ ಬೆಳೆಸಿ, ಜನಪದ ಹಾಡಿಗೆ ಕಲೆಗೆ ಬೆಲೆ ಕೊಡಿ. ಜನಪದ ಸಾಹಿತ್ಯ ನಿಮ್ಮಂತಹ ಅಭಿಮಾನಿಗಳಿಂದ ಜೀವಂತವಾಗಿದೆ ಎಂದರು.
ಐ.ಎಂ ಶಿವಾನಂದ ಸ್ವಾಮಿ ಪ್ರಾಸ್ತಾವಿಕ ಮಾತನಾಡಿ, 1989-90 ರಲ್ಲಿ ಶಿರಾಳಕೊಪ್ಪದಲ್ಲಿ ಸಾಮೂಹಿಕ ದಸರಾ ಆಚಣೆಗೆ ಚಾಲನೆ ನೀಡಲಾಯಿತು. ದಸರಾ ಮೆರವಣಿಗೆಯಲ್ಲಿ ಪ್ರತಿ ವರ್ಷ ಹಲವಾರು ಕಲಾ ತಂಡ ಪರಿಚಯಿಸಿದ್ದೇವೆ. ನಂತರ ಪುರಸಭೆಯಿಂದ ದೊರೆತ ವಿಷೇಶ ಅನುಧಾನ ದಸರಾ ಸಂಭ್ರಮ ಅದ್ದೂರಿ ಎನಿಸಿದೆ ಇದಕ್ಕಾಗಿ ಶ್ರಮಿಸಿದ ಮುಖ್ಯಾಧಿಕಾರಿ ಗಳನ್ನು ನಾವು ಮರೆಯುವುದಿಲ್ಲ ಎಂದರು.
ಆದಿತ್ಯ ಎನರ್ಜಿ ಮಾಲಿಕ ಅಗಡಿ ಅಶೋಕ್ ಮಾತನಾಡಿ, ಎಲ್ಲಾ ಸಮಾಜಗಳು ಒಂದೆಡೆ ಕಲೆತು ಬೆರೆಯಲು ಶಿರಾಳಕೊಪ್ಪ ದಸರಾ ಹಬ್ಬ ಮಾದರಿ. ದಸರಾ ಹಬ್ಬದ ಸಮಿತಿ ಸದಸ್ಯರು ನಡೆಸಿಕೊಡುತ್ತಿರುವ ಕಾರ್ಯಕ್ರಮ ಶ್ಲಾಘನೀಯ ಎಂದರು.
ಗ್ಯಾರಂಟಿ ಯಯೋಜನೆಯ ಅಧ್ಯಕ್ಷ ನಾಗರಾಜ್ ಗೌಡ್ರು ಮಾತನಾಡಿ, ಯುಗಾದಿ ಮತ್ತು ರಂಜಾನ್ ಹಬ್ಬಕ್ಕೆ ಶುಭ ಕೋರಿದರು. ದಸರಾ ಸಮಿತಿ ಅಧ್ಯಕ್ಷ ರಾಘವೇಂದ್ರ ಮಾತನಾಡಿ, ಸಂಗೀತದ ಕಡೆ ಜನತೆ ಮುಖಮಾಡುವಂತೆ ಜಾನಪದ ಕಲಾವಿದ ಗುರುರಾಜ ಹೊಸಕೋಟಿ ಹೊಸ ಅಲೆ ಸೃಷ್ಠಿಸಿದ್ದಾರೆ. ಇವರ ಹಾಡುಗಳಲ್ಲಿ ನೀತಿ, ತಾಯಿಯ ಮಮತೆ, ಮಕ್ಕಳ ಸಂಸ್ಕಾರ ಅಡಗಿವೆ ಇಂಥಹ ಸಾದಕರಿಂದ ಸಮಾಜದ ಪರಿವರ್ತನೆ ಸಾಧ್ಯ ಎಂದು ಹೇಳಿದರು.
ಸಿದ್ದೇಶ್ವರ ದೇವರು ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷೆ ಮಮತಾ ನಿಂಗಪ್ಪ, ಹೆಚ್ ಎಂ ಚಂದ್ರಶೇಖರ್, ರಾಜೇಶ್ವರಿ ವಸಂತಕುಮಾರ್, ವಿಜಯಲಕ್ಷ್ಮಿ , ಲಲಿತಮ್ಮ, ರಟ್ಟೆಹಳ್ಳಿ ಲೋಕೇಶ್, ವೀರೇಶ್, ನಾಗರಾಜ ಗೌಡ್ರು, ಮಹಾಬಲೇಶ್, ಮುದಾಸೀರ್ ಅಹ್ಮದ್, ಮಂಜುನಾಥ್, ಎಂ ಆರ್ ರಾಘವೇಂದ್ರ, ಪತ್ರಕರ್ತ ಬಿ.ವಿ ಶೇಷಗಿರಿ, ಡ್ಯಾನ್ಸ್ ಗ್ರೂಪ್ ಪವನ್, ವಿಷ್ಣು ರಾಯ್ಕರ್, ಶಿವಾನಂದ ಸ್ವಾಮಿ ಮತ್ತು ದಸರಾ ಉತ್ಸವ ಸಮಿತಿಯಲ್ಲಿ ಶ್ರಮಿಸಿದ ಎಲ್ಲರನ್ನೂ ಸನ್ಮಾನಿಸಿ ಗೌರವಿಸಲಾಯಿತು.